AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಗೆದ್ದ ಟೀಂ ಇಂಡಿಯಾ; ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಲಗ್ಗೆ

India vs England: ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ 4 ಟೆಸ್ಟ್​ ಸರಣಿಗಳ ಅಂತಿಮ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲೇ ಟೀಂ ಇಂಡಿಯಾ ಗೆಲುವು ಸಾಧಿಸಿದೆ.

India vs England: ಗೆದ್ದ ಟೀಂ ಇಂಡಿಯಾ; ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಲಗ್ಗೆ
ಅಕ್ಷರ್​ ಪಟೇಲ್​ಗೆ ವಿಕೆಟ್, ಭಾರತೀಯ ಆಟಗಾರರ ಸಂಭ್ರಮ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on:Mar 06, 2021 | 4:53 PM

ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ 4 ಟೆಸ್ಟ್​ ಸರಣಿಗಳ ಅಂತಿಮ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ನೀಡಿದ 160 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ತಂಡ ಆರಂಭದಲ್ಲೇ ವಿಕೆಟ್​ಗಳನ್ನ ಕಳೆದುಕೊಳ್ಳಲು ಪ್ರಾರಂಭಿಸಿತು. ಕೇವಲ 65 ರನ್​ಗಳಿಗೆ ಇಂಗ್ಲೆಂಡ್‌ ತಂಡದ ಪ್ರಮುಖ 6 ವಿಕೆಟ್​ಗಳು ನೆಲಕ್ಕುರುಳಿತು. ಹೀಗಾಗಿ ಭಾರತಕ್ಕೆ ಇಂದೇ ಜಯದ ಮಾಲೆ ಬೀಳುವ ಎಲ್ಲಾ ಲಕ್ಷಣಗಳು ಕಂಡು ಬಂದಿತ್ತು. ಅದರಂತೆ ಭಾರತ ವಿಜಯ ಪತಾಕೆ ಹಾರಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ ತಂಡ ನೀಡಿದ್ದ 205 ರನ್​ಗಳ ಅಲ್ಪಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಆರಂಭಿಕರಾದ ಗಿಲ್​, ಪೂಜಾರ, ಕೊಹ್ಲಿ, ರಹಾನೆ, ಬೇಗನೆ ಪೆವಿಲಿಯನ್​ ಸೇರಿದರು. ಆದರೆ ರೋಹಿತ್​ ಜೊತೆಗೂಡಿದ ಪಂತ್​ ಶತಕ ಸಿಡಿಸಿ ಮಿಂಚಿದರು. ರೋಹಿತ್​ ಸಹ ಅಮೂಲ್ಯ 49 ರನ್​ಗಳ ಕೊಡುಗೆ ನೀಡಿದರು. ಪಂತ್​ ಜೊತೆ ಉತ್ತಮ ಆಟ ಆಡಿದ ಸುಂದರ್​ ಅಜೇಯ 96 ರನ್​ಗಳಿಸಿದರೆ, ಸುಂದರ್​ಗೆ ಉತ್ತಮ ಸಾಥ್​ ನೀಡಿದ ಅಕ್ಷರ್​ 44 ರನ್​ ಗಳಿಸಿದರು. ಅಂತಿಮವಾಗಿ ಭಾರತ 365 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಟಿಕೆಟ್​ ಪಕ್ಕಾ  ಇಂಗ್ಲೆಂಡ್‌ ವಿರುದ್ಧ ಅಂತಿಮ ಟೆಸ್ಟ್​ನಲ್ಲಿ ಗೆಲುವಿನ ಸನಿಹದಲ್ಲಿರುವ ಟೀಂ ಇಂಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶ ಸುಗಮವಾಗಿದೆ. ಒಂದು ವೇಳೆ ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದೆ ಇದ್ದರೂ ಕನಿಷ್ಠ ಪಕ್ಷ ಪಂದ್ಯವನ್ನು ಡ್ರಾ ಮಾಡಿಕೊಂಡರೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಪ್ರವೇಶ ಸಿಗುವ ಅವಕಾಶವಿತ್ತು. ಹೀಗಾಗಿ ಲಾರ್ಡ್ಸ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಟ್ಟಕ್ಕಾಗಿ ಸೆಣಸಾಡಲಿದೆ.

ಗಾವಸ್ಕರ್​ಗೆ ಉಡುಗೂರೆ..! ತಮ್ಮ ಟೆಸ್ಟ್​ ವೃತ್ತಿ ಜೀವನಕ್ಕೆ ಕಾಲಿರಿಸಿ 50 ವರ್ಷ ತುಂಬಿದ ಸಂತಸದಲ್ಲಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ಗೆ ಈ ಟೆಸ್ಟ್​ ಗೆಲುವು ಉಡುಗೂರೆ ಅಂತಲೇ ಬಿಂಬಿತವಾಗುತ್ತಿದೆ. ಈ ಹಿಂದೆ ಪಿಚ್​ ಬಗ್ಗೆ ಸಾಕಷ್ಟು ಮಾಜಿ ಇಂಗ್ಲೆಂಡ್​ ಆಟಗಾರರು ಟೀಕೆ ಮಾಡಿದ್ದಾಗ, ಗವಾಸ್ಕರ್​ ಟೀಂ ಇಂಡಿಯಾದ ಬೆನ್ನಿಗೆ ನಿಂತಿದ್ದರು. ಅಲ್ಲದೆ ಟೀಕಾಕಾರರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದರು. ಹೀಗಾಗಿ ಈ ಟೆಸ್ಟ್​ ಗೆಲುವು ಟೀಂ ಇಂಡಿಯಾ ಪಾಳಯಕ್ಕೆ ಎರೆಡೆರಡು ಖುಷಿ ನೀಡುತ್ತಿದೆ. ಮೊದಲನೆಯದು ಗವಾಸ್ಕರ್​ ಅವರ ಸಾಧನೆಗೆ ಗೆಲುವಿನ ಉಡುಗೂರೆಯಾದರೆ, ಎರಡನೇಯದು ಪ್ರಧಾನಿ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಸತತ ಎರಡನೇ ಜಯ ಸಾಧಿಸಿದ್ದಾಗಿದೆ.

ಭಾರತೀಯರಲ್ಲಿ ಮನೆಮಾಡಿದ ಖುಷಿ.. ಸೆಲೆಬ್ರೇಷನ್ಸ್​ ಸ್ಟಾರ್ಟೆಡ್​!  ಇಂಡಿಯಾ- ಇಂಗ್ಲೆಂಡ್​ ನಡುವಿನ ಪಂದ್ಯವೆಂದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಅದು ಕಣ್ಣಿಗೆ ಹಬ್ಬವಿದ್ದಂತೆ. ಏಕೆಂದರೆ ಈ ಎರಡೂ ತಂಡಗಳ ನಡುವಿನ ಕದನಕ್ಕೆ, ಇಂಡಿಯಾ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್​ ಪಂದ್ಯದಷ್ಟೇ ಹೈಪ್​ ಇರುತ್ತದೆ. ಹೀಗಾಗಿ ಟೀಂ ಇಂಡಿಯಾದ ಈ ಗೆಲುವು ಕ್ರಿಕೆಟ್​ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ನೀಡುವುದಂತೂ ಗ್ಯಾರೆಂಟಿ.. ಅದಕ್ಕೇ ಅದಾಗಲೇ.. Celebrations have Started!

ಇದನ್ನೂ ಓದಿ:India vs England 4th Test Day 3: ಲಂಚ್ ವಿರಾಮದ ನಂತರ ಅಶ್ವಿನ್ ಡಬಲ್ ಸ್ಟ್ರೈಕ್ !

Published On - 1:47 pm, Sat, 6 March 21

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ