AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushil Kumar: ವಿಶ್ವ ಕುಸ್ತಿ ದಿನದಂದೇ ಪೊಲೀಸರ ಅತಿಥಿಯಾದ ಕುಸ್ತಿಪಟು ಸುಶೀಲ್ ಕುಮಾರ್; ವಿಡಿಯೋ ನೋಡಿ

Sushil Kumar: ಗ್ರೀಕೋ ರೋಮನ್ ವ್ರೆಸ್ಲಿಂಗ್ ಪಂದ್ಯಾವಳಿ ಆಸ್ಟ್ರಿಯಾದಲ್ಲಿ 117 ವರ್ಷಗಳ ಹಿಂದೆ ಮೊದಲ ಬಾರಿಗೆ ನಡೆಯಿತು. ಅಂದಿನಿಂದ ಇದನ್ನು ವಿಶ್ವ ಕುಸ್ತಿ ದಿನ ಎಂದು ಕರೆಯಲಾಗುತ್ತದೆ.

Sushil Kumar: ವಿಶ್ವ ಕುಸ್ತಿ ದಿನದಂದೇ ಪೊಲೀಸರ ಅತಿಥಿಯಾದ ಕುಸ್ತಿಪಟು ಸುಶೀಲ್ ಕುಮಾರ್; ವಿಡಿಯೋ ನೋಡಿ
ಸುಶೀಲ್ ಕುಮಾರ್
ಪೃಥ್ವಿಶಂಕರ
|

Updated on: May 23, 2021 | 5:36 PM

Share

ಇಂದು, ಮೇ 23 ರ ದಿನವನ್ನು ವಿಶ್ವದಾದ್ಯಂತ ವಿಶ್ವ ಕುಸ್ತಿ ಎಂದು ಆಚರಿಸಲಾಗುತ್ತದೆ, ಆದರೆ ಭಾರತಕ್ಕೆ ಈ ದಿನವನ್ನು ಕರಾಳ ದಿನವೆಂದು ನೆನಪಿಸಿಕೊಳ್ಳಲಾಗುವುದು. ವಿಶ್ವ ಕುಸ್ತಿ ದಿನದ ಅದೇ ದಿನ, ಭಾರತದ ಅತಿದೊಡ್ಡ ಒಲಿಂಪಿಕ್ ಅಥ್ಲೀಟ್ ಸುಶೀಲ್ ಕುಮಾರ್​ನನ್ನು, ಎರಡು ಪದಕಗಳನ್ನು ಗೆದ್ದ ಏಕೈಕ ಆಟಗಾರ, ಯುವ ಕುಸ್ತಿಪಟು ಸಾಗರ್ ಧಂಕರ್ ಅವರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಸುಮಾರು 20 ದಿನಗಳ ಕಾಲ ಪರಾರಿಯಾಗಿದ್ದ ಸುಶೀಲ್ ಕುಮಾರ್ ಕೊನೆಗೆ ಭಾನುವಾರ ಬೆಳಿಗ್ಗೆ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕುಸ್ತಿ ದಿನವನ್ನು ಆಚರಿಸುವ ಸಂಪ್ರದಾಯವು 117 ವರ್ಷಗಳ ಹಳೆಯಾದ್ದಾಗಿದ್ದು. ಗ್ರೀಕೋ ರೋಮನ್ ವ್ರೆಸ್ಲಿಂಗ್ ಪಂದ್ಯಾವಳಿ ಆಸ್ಟ್ರಿಯಾದಲ್ಲಿ 117 ವರ್ಷಗಳ ಹಿಂದೆ ಮೊದಲ ಬಾರಿಗೆ ನಡೆಯಿತು. ಅಂದಿನಿಂದ ಇದನ್ನು ವಿಶ್ವ ಕುಸ್ತಿ ದಿನ ಎಂದು ಕರೆಯಲಾಗುತ್ತದೆ. ಈಗ ಗ್ರೀಕೋ ರೋಮನ್ ಕುಸ್ತಿಪಟುವನ್ನು ಕೊಂದ ಆರೋಪ ಸುಶೀಲ್ ಕುಮಾರ್ ಅವರ ಮೇಲೂ ಇದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅದೇ ಸುಶೀಲ್ ಕುಮಾರ್ ಅವರ ಮೇಲೆ, ಅದೇ ಸುಶೀಲ್ ಹುಡುಕಿಕೊಟ್ಟವರಿಗೆ ಬಹುಮಾನಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು. ದೆಹಲಿ ಪೊಲೀಸರು ಒಂದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು.

ಸುಶೀಲ್ ಕುಮಾರ್ ಬಂಧನದ ವಿಡಿಯೋ ವೈರಲ್ ಸೋಷಿಯಲ್ ಮೀಡಿಯಾದಲ್ಲಿ ಸುಶೀಲ್ ಕುಮಾರ್ ಬಂಧನದ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಸುಶೀಲ್ ಕುಮಾರ್ ಅವರ ಮುಖದ ಮೇಲೆ ಟವೆಲ್ ಸುತ್ತಿರುವುದನ್ನು ಕಾಣಬಹುದು, ಸುತ್ತಲೂ ಪೊಲೀಸರು ಸುತ್ತುವರೆದಿದ್ದಾರೆ, ಆದರೆ ಅವರ ದೃಷ್ಟಿಯಲ್ಲಿ ಯಾವುದೇ ಭಯ ಇರಲಿಲ್ಲ. ಪ್ರಪಂಚದಾದ್ಯಂತ ಭಾರತೀಯ ಕುಸ್ತಿಯ ಗುರುತನ್ನು ಹೊಂದಿದ್ದ ಮುಖ, ಸುಶೀಲ್ ಕುಮಾರ್ ಈ ರೀತಿ ಮುಖವನ್ನು ಮರೆಮಾಡಿದ್ದನ್ನು ನೋಡಿ ಅಭಿಮಾನಿಗಳು ಕೂಡ ಬೇಸರಗೊಂಡರು. ವಿಡಿಯೋ ಹಂಚಿಕೊಳ್ಳುವಾಗ ಅಭಿಮಾನಿಗಳು ಇದನ್ನು ಭಾರತೀಯ ಕ್ರೀಡಾ ಜಗತ್ತಿಗೆ ಕಪ್ಪು ದಿನ ಎಂದು ಕರೆದರೆ, ದೇಶದ ಹೆಮ್ಮೆಯಿದ್ದ ಸುಶೀಲ್ ಕುಮಾರ್ ಅವರು ಇಂದು ಭಾರತೀಯ ಕುಸ್ತಿಯಲ್ಲಿ ದೊಡ್ಡ ಆರೋಪಿಯಾಗಿ ಮಾರ್ಪಟ್ಟಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ಸಾಗರ್ ಧಂಖರ್ ಕೊಲೆಗೆ ಸುಶೀಲ್ ಕಾರಣ? ಮೇ 4 ರಂದು ಮಧ್ಯಾಹ್ನ 12 ರ ಸುಮಾರಿಗೆ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುಗಳ ನಡುವೆ ಜಗಳದ ಸುದ್ದಿ ದೆಹಲಿ ಪೊಲೀಸರಿಗೆ ಸಿಕ್ಕಿತು. ಜಗಳದಲ್ಲಿ ಗಾಯಗೊಂಡಿದ್ದ ಕುಸ್ತಿಪಟು ಸಾಗರ್ ಅವರನ್ನು ಬಿಜೆಆರ್ಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರನ್ನು ಆಘಾತ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಸಾಗರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಸುಶೀಲ್ ಕುಮಾರ್ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲೆಂದು ಹೇಳಿಕೊಂಡಿದ್ದರು.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ