AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಮುಕ್ಕಣ್ಣು, ಜಡೆ ಬಾಲದೊಂದಿಗೆ ಜನಿಸಿದ ಕರು; ಶಿವನ ಅವತಾರವೆಂದು ಪೂಜಿಸುತ್ತಿರುವ ಜನರು

ಹಸುವೊಂದು ಮೂರು ಕಣ್ಣುಗಳನ್ನು ಹಾಗೂ ಮಚ್ಚೆಯ ಕೂದಲಿನ ರಾಶಿಯುಳ್ಳ ಬಾಲವನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಈ ಕರು ಶಿವನ ಅವತಾರವೆಂದು ಜನರು ಪೂಜಿಸುತ್ತಿದ್ದಾರೆ.

Bizarre News: ಮುಕ್ಕಣ್ಣು, ಜಡೆ ಬಾಲದೊಂದಿಗೆ ಜನಿಸಿದ ಕರು; ಶಿವನ ಅವತಾರವೆಂದು ಪೂಜಿಸುತ್ತಿರುವ ಜನರು
ಮೂರು ಕಣ್ಣುಗಳೊಂದಿಗೆ ಜನಿಸಿದ ಕರು
Rakesh Nayak Manchi
|

Updated on:Aug 21, 2022 | 11:46 AM

Share

ಅನೇಕ ಅಪರೂಪದ ಹಾಗೂ ವಿಲಕ್ಷಣ ಜನನಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಛತ್ತೀಸ್‌ಗಢದ ರಾಜನಂದಗಾಂವ್‌ನ ಹೇಮಂತ್ ಚಂದೇಲ್ ಅವರ ಮನೆಯಲ್ಲಿ ಹಸುವೊಂದು ಮೂರು ಕಣ್ಣುಗಳನ್ನು ಹೊಂದಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಈ ವಿಚಾರ ಹಬ್ಬುತ್ತಿದ್ದಂತೆ ಕರುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇನ್ನೂ ಕೆಲವರು ಈ ಕರುವನ್ನು ಶಿವನ ಅವತಾರವೆಂದು ಪೂಜೆಯನ್ನೂ ಮಾಡಿದ್ದಾರೆ. ಈ ಕರು ಮೂರು ಕಣ್ಣುಗಳ ಜೊತೆಗೆ ನಾಲ್ಕು ಮೂಗಿನ ಹೊಳ್ಳೆಗಳನ್ನು ಕೂಡ ಹೊಂದಿದೆ.

“ಕರು ತನ್ನ ಹಣೆಯ ಮಧ್ಯದಲ್ಲಿ ಹೆಚ್ಚುವರಿ ಕಣ್ಣು ಮತ್ತು ಮೂಗಿನ ಹೊಳ್ಳೆಯಲ್ಲಿ ನಾಲ್ಕು ರಂಧ್ರಗಳನ್ನು ಹೊಂದಿದೆ. ಇದರ ಬಾಲವು ‘ಜಟಾ’ (ಮಚ್ಚೆಯ ಕೂದಲಿನ ರಾಶಿ) ನಂತೆ ಕಾಣುತ್ತದೆ ಮತ್ತು ಅದರ ನಾಲಿಗೆ ಸಾಮಾನ್ಯ ಕರುಗಳಿಗಿಂತ ಉದ್ದವಾಗಿದೆ” ಎಂದು ಹೇಮಂತ್ ಚಾಂದೇಲ್ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕರು ಹುಟ್ಟಿದಾಗಿನಿಂದಲೂ ರೈತ ಚಂದೇಲ್ ಮನೆಯಲ್ಲಿ ತೆಂಗಿನಕಾಯಿ, ಹೂವಿನ ನೈವೇದ್ಯ ಸಮರ್ಪಿಸುತ್ತಿದ್ದಾರೆ. ಆದಾಗ್ಯೂ, ಪಶುವೈದ್ಯ ತಜ್ಞರು, ಅಂತಹ ನಿದರ್ಶನಗಳನ್ನು ಪವಾಡಗಳಂತೆ ನೋಡಬಾರದು. ಬದಲಿಗೆ ವೈದ್ಯಕೀಯ ವೈಪರೀತ್ಯಗಳಾಗಿ ಪರಿಗಣಿಸಬೇಕು ಎಂದು ಹೇಳುತ್ತಾರೆ. ಅಂತಹ ವಿರೂಪಗಳೊಂದಿಗೆ ಜನಿಸಿದ ಹೆಚ್ಚಿನ ಪ್ರಾಣಿಗಳಂತೆಯೇ ಕರುವಿನ ಆರೋಗ್ಯವು ಶೀಘ್ರದಲ್ಲೇ ಹದಗೆಡಬಹುದು ಎಂದು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಜಾನುವಾರು ಇಲಾಖೆಯ ಡಾ. ತರುಣ್ ರಾಮ್ಟೆಕೆ, “ಇದು ಹಾರ್ಮೋನ್ ಅಸ್ವಸ್ಥತೆಯ ಕಾರಣದಿಂದ ಇಂತಹ ಕರುವಿನ ಜನನವಾಗಿದೆ. ಅಂತಹ ಸಂದರ್ಭಗಳಲ್ಲಿ ಪ್ರಾಣಿ ದೀರ್ಘಕಾಲ ಬದುಕುವುದಿಲ್ಲ. ಕೆಲವು ಎರಡು ವರ್ಷ ಅಥವಾ ಆರು ತಿಂಗಳು ಬದುಕಿದರೆ, ಇನ್ನೂ ಕೆಲವು ಕೇವಲ 10-15 ದಿನಗಳವರೆಗೆ ಬದುಕುತ್ತವೆ ಎಂದಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಕರು ಆರೋಗ್ಯವಾಗಿರುವುದು ಕಂಡುಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. ಕರುವಿನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಜನರು ವಿಚಿತ್ರ ಜನ್ಮದಿಂದ ಆಕರ್ಷಿತರಾಗಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Sun, 21 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?