AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಚಾಯ್ ಚಾಯ್ ಚಾಯ್.. ರಸಗುಲ್ಲಾ ಚಾಯ್.. ವಿಡಿಯೋ ವೈರಲ್

Viral Video: ಗ್ರೀನ್ ಟೀ, ಲೆಮೆನ್ ಟೀ, ಶುಂಠಿ ಟೀ ಇತ್ಯಾದಿ ಫ್ಲೇವರ್ ಟೀ ನೋಡಿದ್ದೀರಿ, ಆದರೆ ಎಂದಾದರೂ ಸಕ್ಕರೆಪಾಕದಲ್ಲಿ ಸವಿಯು ರಸಗುಲ್ಲಾದ ಚಹಾ ನೋಡಿದ್ದೀರಾ? ಇಲ್ಲಿದೆ ನೋಡಿ ರಸಗುಲ್ಲಾ ಚಹಾದ ವಿಡಿಯೋ..

Bizarre News: ಚಾಯ್ ಚಾಯ್ ಚಾಯ್.. ರಸಗುಲ್ಲಾ ಚಾಯ್.. ವಿಡಿಯೋ ವೈರಲ್
ರಸಗುಲ್ಲಾ ಚಹಾ
TV9 Web
| Edited By: |

Updated on:Aug 21, 2022 | 10:03 AM

Share

ಚಹಾಕ್ಕೆ ಭಾರತದಲ್ಲಿ ತನ್ನದೇ ಆದ ಸ್ಥಾನವಿದೆ, ವಿಶ್ರಾಂತಿ ವೇಳೆ ಜ್ಯೂಸ್ ಕುಡಿಯುವವರಿಗಿಂತ ಒಂದು ಕಪ್ ಚಹಾ ಕುಡಿಯುವವರೇ ಹೆಚ್ಚು. ಇನ್ನು ಯುವಕರಾದರೆ ಬೈಕ್ ಮೂಲಕ ಹೋಗಿ 10 ರೂಪಾಯಿ ಚಹಾ ಕುಡಿದು ಬರುತ್ತಾರೆ. ಇಂತಹ ಚಹಾದಲ್ಲೂ ಶುಂಠಿ ಚಹಾ, ಲೆಮೆನ್ ಟೀ, ಚಾಕಲೇಟ್ ಟೀ, ಗ್ರೀನ್ ಟೀ ಸೇರಿದಂತೆ ಅನೇಕ ಫ್ಲೇವರ್​ಗಳನ್ನು ಕಾಣಬಹುದಾಗಿದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಿಮ್ಮನ್ನು ಅಚ್ಚರಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಯಾವುದನ್ನು ನೀವು ಸಕ್ಕರೆ ಪಾಕದಲ್ಲಿ ಹಾಕಿ ತಿನ್ನುತ್ತೀರೋ ಅದೇ ರಸಗುಲ್ಲಾದ ಉಂಡೆಯನ್ನು ಬೆರೆಸಿ ಚಹಾವನ್ನು ತಯಾರಿಸಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ವಿಲಕ್ಷಣ ಸಂಯೋಜನೆಯ ರಸಗುಲ್ಲಾ ಚಹಾ ಮಾಡುತ್ತಿರುವ ದೃಶ್ಯಾವಳಿಯನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಆಹಾರ ಬ್ಲಾಗರ್ kolkatadelites ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸೌತ್ ಸಿಟಿ ಮಾಲ್ ಪಕ್ಕದಲ್ಲಿರುವ ಚುಮುಕ್ ಚೋಮೊಕ್ ಎಂಬಲ್ಲಿ ಈ ಚಹಾ ಸಿಗುತ್ತದೆ, ಪ್ರತಿ ಕಪ್​ಗೆ 35ರೂಪಾಯಿ ಬೆಲೆ ಇದೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋದಲ್ಲಿ ಕಾಣುವಂತೆ, ಚಹಾ ಮಾಡುವ ಅಂಗಡಿ ಮಾಲೀಕ, ಮಣ್ಣಿನ ಲೋಟದಲ್ಲಿ ರಸಗುಲ್ಲಾದ ಉಂಡೆಯನ್ನು ಹಾಕುತ್ತಾರೆ, ನಂತರ ಅದಕ್ಕೆ ಚಹಾವನ್ನು ಬೆರೆಸುತ್ತಾರೆ. ಅಂತಿಮವಾಗಿ ಸ್ವಲ್ಪ ಬೆಣ್ಣೆ ಕೂಡ ಹಾಕಿ ಮಿಶ್ರಣ ಮಾಡುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದಿದ್ದು, 11ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಈ ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 am, Sun, 21 August 22

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ