AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಾಮಿಡಿ ಶೋ ನೋಡಿ ನಕ್ಕು ನಕ್ಕು ಮೂರ್ಛೆ ತಪ್ಪಿ ಬಿದ್ದ ವ್ಯಕ್ತಿ; ಆಸ್ಪತ್ರೆಗೆ ದಾಖಲು

ಡಾ.ಸುಧೀರ್ ಕುಮಾರ್ ಹೇಳುವಂತೆ "ಇತರ ಆರೋಗ್ಯ ಸಮಸ್ಯೆಯನ್ನು ಅಂದರೆ ಲೋ ಬಿಪಿ ಮುಂತಾದವು ಹೊರತುಪಡಿಸಿ ಏಕಾಏಕಿ ಕುಸಿದು ಬಿದ್ದರೆ ಅದನ್ನು ಸಿಂಕೋಪ್ ಎಂದು ಕರೆಯಲಾಗುತ್ತದೆ. ಸಿಂಕೋಪ್ ಎನ್ನುವುದು ಹಠಾತ್ ಸ್ಥಿತಿಯಾಗಿದ್ದು, ಒಬ್ಬ ವ್ಯಕ್ತಿಯು ಮೂರ್ಛೆ ಹೋಗುತ್ತಾನೆ ಮತ್ತು ಅವನು ಪ್ರಜ್ಞೆ ಮರಳಿದ ತಕ್ಷಣ ಚೇತರಿಸಿಕೊಳ್ಳುತ್ತಾನೆ."

Viral News: ಕಾಮಿಡಿ ಶೋ ನೋಡಿ ನಕ್ಕು ನಕ್ಕು ಮೂರ್ಛೆ ತಪ್ಪಿ ಬಿದ್ದ ವ್ಯಕ್ತಿ; ಆಸ್ಪತ್ರೆಗೆ ದಾಖಲು
Follow us
ಅಕ್ಷತಾ ವರ್ಕಾಡಿ
|

Updated on:Jun 01, 2024 | 3:06 PM

ಹೈದರಾಬಾದ್‌ನಲ್ಲಿ 53 ವರ್ಷದ ವ್ಯಕ್ತಿಯೊಬ್ಬ  ಟಿವಿಯಲ್ಲಿ ಕಾಮಿಡಿ ಶೋ ನೋಡಿ ನಕ್ಕು ನಕ್ಕು ಮೂರ್ಛೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರ್ಯಕ್ರಮ ಸಾಕಷ್ಟು ಹಾಸ್ಯಸ್ಪದವಾಗಿದ್ದರಿಂದ ಸಾಕಷ್ಟು ನಕ್ಕು ನಕ್ಕು ಸುಸ್ತಾಗಿ ಕುಳಿತಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖ್ಯಾತ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಅವರ ಪ್ರಕಾರ, ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಟಿವಿ ನೋಡುತ್ತಾ ಸಮಯ ಕಳೆಯುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಬಿದ್ದು ಪ್ರಜ್ಞಾಹೀನರಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು ಈಗ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಇತರ ಆರೋಗ್ಯ ಸಮಸ್ಯೆಯನ್ನು ಅಂದರೆ ಲೋ ಬಿಪಿ ಮುಂತಾದವು ಹೊರತುಪಡಿಸಿ ಏಕಾಏಕಿ ಕುಸಿದು ಬಿದ್ದರೆ ಅದನ್ನು ಸಿಂಕೋಪ್ ಎಂದು ಕರೆಯಲಾಗುತ್ತದೆ ಎಂದು ಡಾ.ಸುಧೀರ್ ಕುಮಾರ್ ಹೇಳಿದ್ದಾರೆ. ಸಿಂಕೋಪ್ ಎನ್ನುವುದು ಹಠಾತ್ ಸ್ಥಿತಿಯಾಗಿದ್ದು, ಒಬ್ಬ ವ್ಯಕ್ತಿಯು ಒದ್ದಾಡಲು ಪ್ರಾರಂಭಿಸುತ್ತಾನೆ ಮತ್ತು ಮೂರ್ಛೆ ಹೋಗುತ್ತಾನೆ ಮತ್ತು ಅವನು ಪ್ರಜ್ಞೆ ಮರಳಿದ ತಕ್ಷಣ ಚೇತರಿಸಿಕೊಳ್ಳುತ್ತಾನೆ ಎಂದು ಅವರು ಹೇಳಿದ್ದಾರೆ.

ದೀರ್ಘಕಾಲದ ನಗು ಹೈಪರ್ವೆನ್ಟಿಲೇಷನ್ ಅನ್ನು ಉಂಟುಮಾಡಬಹುದು, ಇದು ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕದ ಸಮತೋಲನವನ್ನು ಬದಲಾಯಿಸುತ್ತದೆ, ಸಂಭಾವ್ಯವಾಗಿ ರಕ್ತನಾಳಗಳ ಸಂಕೋಚನಕ್ಕೆ ಕಾರಣವಾಗುತ್ತದೆ ಮತ್ತು ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಇಳಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಬೇಯಿಸಿದ ಮೊಟ್ಟೆ ಸಿಪ್ಪೆಯನ್ನು ಹೀಗೂ ತೆಗೆಯಬಹುದು, ಇಲ್ಲಿದೆ ವಿಡಿಯೋ

ಇದರ ಹೊರತಾಗಿ ವಿವಿಧ ಕಾರಣಗಳಿಗಾಗಿ ವಿವಿಧ ಜನರಿಗೆ ಮೂರ್ಛೆ ಸಂಭವಿಸಬಹುದು. ಆದರೆ ಇದು ಪದೇ ಪದೇ ಸಂಭವಿಸಿದರೆ, ಇದು ಹೃದಯ ಅಥವಾ ರಕ್ತನಾಳದ ಸಮಸ್ಯೆಯ ಸಂಕೇತವಾಗಿರಬಹುದು ಎಂದು ಡಾ.ಸುಧೀರ್ ಕುಮಾರ್ ಎಚ್ಚರಿಸುತ್ತಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Sat, 1 June 24

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್