Viral Video: ನಾನು ಬರ್ಲಾ ನಿಮ್ಮ ಸಹಾಯಕ್ಕೆ; ಭತ್ತ ಕೊಯ್ಲು ಮಾಡುವ ವೇಳೆ ಗದ್ದೆಗೆ ಬಂದ ಮಯೂರಿ 

ಹೆಚ್ಚಾಗಿ ಈ ನವಿಲುಗಳು ಮುಂಜಾನೆ ಅಥವಾ ಮುಸ್ಸಂಜೆ ಹೊತ್ತಿನಲ್ಲಿ ಆಹಾರವನ್ನರಸುತ್ತಾ, ಗದ್ದೆಗಳ ಕಡೆ ಬರುತ್ತವೆ. ಆ ಗದ್ದೆಗಳ ಪಕ್ಕ ಯಾರಾದ್ರೂ ಮನುಷ್ಯರು ಕಂಡಂರತೂ ಈ ನವಿಗಳು ಅಲ್ಲಿಂದ ಓಡಿ ಬಿಡುತ್ತವೆ.  ಆದ್ರೆ ಇಲ್ಲೊಂದು ನವಿಲು ಮಾತ್ರ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವ ವೇಳೆ ನಾನು ನಿಮಗೆ ಸಹಾಯ ಮಾಡುತ್ತೇನೆ ಎನ್ನುತ್ತಾ ರೈತರ ಪಕ್ಕದಲ್ಲಿಯೇ ನಿಂತು ಅತ್ತಿಂತ ಇತ್ತ ಸುತ್ತಾಡಿದೆ.   ಈ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

Viral Video: ನಾನು ಬರ್ಲಾ ನಿಮ್ಮ ಸಹಾಯಕ್ಕೆ; ಭತ್ತ ಕೊಯ್ಲು ಮಾಡುವ ವೇಳೆ ಗದ್ದೆಗೆ ಬಂದ ಮಯೂರಿ 
Edited By:

Updated on: Jan 29, 2024 | 4:09 PM

ಪ್ರಕೃತಿಯಲ್ಲಿ  ಪ್ರತಿ ದಿನ ಅದೆಷ್ಟೋ  ವೈಚಿತ್ರ್ಯಗಳು ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಇಂತಹ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ  ಹರಿದಾಡುತ್ತಿರುತ್ತವೆ.  ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವ ವೇಳೆಯಲ್ಲಿ ಬಂದಂತಹ ನವಿಲೊಂದು  ಭತ್ತಗಳ ಮೇಲಿದ್ದ  ಕೀಟಗಳನ್ನು ತಿನ್ನುತ್ತಾ, ರೈತರ ಜೊತೆಗೆ ಸಮಯವನ್ನು ಕಳೆದಿದೆ. ಸಾಮಾನ್ಯವಾಗಿ ಮನುಷ್ಯರು ಇರೋ ಕಡೆ ನವಿಲುಗಳು ಅಷ್ಟಾಗಿ ಬರೋದಿಲ್ಲ, ಅವುಗಳು ಮನುಷ್ಯರನ್ನು ಕಂಡರೆ ದೂರ ಓಡಿ ಹೋಗುತ್ತವೆ. ಆದ್ರೆ ಈ ನವಿಲು ಮಾತ್ರ ನಾನು ನಿಮಗೆ ಸಹಾಯ ಮಾಡುತ್ತೇನೆ ಎನ್ನುತ್ತಾ ಭತ್ತ ಕೊಯ್ಲು ಮಾಡುವ ವೇಳೆಯಲ್ಲಿ  ರೈತರ ಪಕ್ಕದಲ್ಲಿಯೇ ಅತ್ತಿಂದ ಇತ್ತ ಓಡಾಡುತ್ತಿತ್ತು.  ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುತ್ತಿದ್ದ ವೇಳೆಯಲ್ಲಿ ಹೆಣ್ಣು ನವಿಲೊಂದು  ರೈತರ ಪಕ್ಕದಲ್ಲಿಯೇ ಸುತ್ತಾಡುತ್ತಿರುವ   ಸುಂದರ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ತುಣುಕನ್ನು @tarapkari1 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುತ್ತಿರುವ ವೇಳೆಯಲ್ಲಿ ಅಲ್ಲಿಗೆ ಬಂದಂತಹ ನವಿಲೊಂದು, ಅಣ್ಣೋ ನಾನ್ ಬರ್ಲೇನೋ ನಿಮ್ ಸಹಾಯಕ್ಕೆ ಬೇಗ ಹೇಳನ್ನೋ ಎನ್ನುತ್ತಾ ರೈತರ ಪಕ್ಕದಲ್ಲಿಯೇ ಅತ್ತಿಂದ ಇತ್ತ ಓಡಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೆಸರಲ್ಲಿ ಸಿಲುಕಿದ ಮರಿಯಾಯ ರಕ್ಷಣೆಗೆ ನಿಂತ ಗಜ ಪಡೆ; ಹೃದಯಸ್ಪರ್ಶಿ ವಿಡಿಯೋ ವೈರಲ್ 

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಐದು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನೀವು ತುಂಬಾ ಅದೃಷ್ಟವಂತರುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼ ಭತ್ತದಲ್ಲಿನ ಕೀಟಗಳನ್ನು ಕಡಿಮೆ ಮಾಡಲೆಂದು  ರೈತರಿಗೆ ಸಹಾಯ ಮಾಡಲು ಬಂದ ರಾಷ್ಟ್ರೀಯ ಪಕ್ಷಿʼ ಅಂತ  ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರು ʼಇದು ನಿಸ್ವಾರ್ಥ ಪ್ರೀತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನವಿಲು ಮನುಷ್ಯರೊಂದಿಗೆ ಬೆರೆತಿರುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us