AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ

ಮಗು ಎಷ್ಟು ಚಂದ ಮಾತನಾಡುತ್ತಿದೆ.. ಮಕ್ಕಳು ಹಠ ಮಾಡುತ್ತಿರುವಾಗ ಓಲೈಸುವ ರೀತಿಯನ್ನು ಈ ವಿಡಿಯೋ ಹೇಳುತ್ತದೆ. ಈ ವಿಡಿಯೋವನ್ನು ವಿಶೇಷವಾಗಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ

ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ
ಮಗು ಮಾತನಾಡುತ್ತಿರುವ ದೃಶ್ಯ
shruti hegde
|

Updated on: Apr 25, 2021 | 1:27 PM

Share

ಪುಟ್ಟ ಪುಟ್ಟ ಪಾದಗಳು, ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ್ತಾ ವಾಲಾಡುತ್ತಾ, ಆಗಾಗ ಬಿದ್ದೇಳುತ್ತಾ ಓಡಾಡುವ ಪುಟ್ಟ ಮಗುವನ್ನು ನೋಡುವುದೇ ಚಂದ. ಸ್ಪಷ್ಟ ಮಾತು ಬಾರದಿದ್ದರೂ ತೊದಲು ನುಡಿಯನ್ನ ಆಡುತ್ತಾ ಇದ್ದರಂತೂ ಹೇಳಿಕೊಳ್ಳಲಾಗದ ಸಂತೋಷ. ಪುಟ್ಟ ತುಟಿಯಂಚಿನಲ್ಲಿ ಹೊರಡುವ ಪದಗಳಿಗೆ ಸಾಟಿ ಎಲ್ಲಿದೆ? ಅಸ್ಪಷ್ಟ ಮಾತಾಗಿದ್ದರೂ, ಪುಟ್ಟ ಕಂದಮ್ಮ ಬಾಯಿಯಲ್ಲಿ ತೊದಲು ನುಡಿಗೆ ಅಮ್ಮ ಕಾಯುತ್ತಿರುತ್ತಾಳೆ. ಅಮ್ಮ ಹೇಳಿಕೊಡುವ ಪದಗಳನ್ನು ಮಗು, ನಗು ನಗುತ್ತಾ ಹೇಳುತ್ತಿರುವ ಪರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಷ್ಟ ಪದಗಳನ್ನು ಮಗು ಹೇಳುವ ರೀತಿ ಎಲ್ಲರನ್ನೂ ರಂಜಿಸುತ್ತಿದೆ. ಇಲ್ಲಿದೆ ವಿಡಿಯೋ ನೀವೂ ನೋಡಿ.

ಮಕ್ಕಳು ಹಠ ಮಾಡುತ್ತಿರುವಾಗ ಓಲೈಸುವ ರೀತಿಯನ್ನು ಈ ವಿಡಿಯೋ ಹೇಳುತ್ತದೆ. ಈ ವಿಡಿಯೋವನ್ನು ವಿಶೇಷವಾಗಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಅಮ್ಮ ಹೇಳಿಕೊಡುತ್ತಿರುವ ಶಬ್ದಗಳನ್ನು ಮಗು ಹೇಳಲು ಕಷ್ಟಪಡುವ ತಮಾಷೆ ಸಂಗತಿ ಎಲ್ಲರಿಗೂ ನಗು ತರಿಸುತ್ತದೆ. ಹೇಳಲು ಕಷ್ಟವಾದ ಅಕ್ಷರಗಳನ್ನು ಮಗು ತನ್ನಲ್ಲಾದಷ್ಟು ಪ್ರಯತ್ನಿಸಿ ಹೇಳುತ್ತದೆ. ಮಗುವಿನ ಈ ವಿಡಿಯೋ ಎಲ್ಲರ ಮುಖದಲ್ಲಿ ನಗು ತರಿಸುವಂತಿದೆ.

ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಸುಮಾರು 4.3 ಮಿಲಿಯನ್​ ಜನ ನೋಡಿದ್ದಾರೆ. ನೆಟ್ಟಿಗರಿಂದ ಕಾಮೆಂಟ್​ಗಳ ಸುರಿಮಳೆಯೇ ಬಂದಿದ್ದು, ಶಬ್ದ ಹೇಳಲು ಕಷ್ಟವಾಗುತ್ತಿದ್ದರೂ ಉಚ್ಛರಿಸಲು ಪ್ರಯತ್ನಿಸಿದಕ್ಕೆ ನೆಟ್ಟಿಗರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‘ಓಹ್​ ಮಗು ತುಂಬಾ ಮುದ್ದಾಗಿದೆ. ತುಂಬಾ ಚುರುಕಾಗಿಯೂ ಇದೆ ಎಂದು ಟ್ವಿಟರ್​ ಬಳಕೆದಾರರು ಬರೆದುಕೊಂಡಿದ್ದಾರೆ. ಮಕ್ಕಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ ಎಂದು ಮತ್ತೋರ್ವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸೆಕೆ ತಾಳಲಾರದೆ ತಣ್ಣೀರಿನಲ್ಲಿ ಸ್ನಾನ ಮಾಡಲು ಗಂಗಾತೀರಕ್ಕೆ ಹೊರಟ ಆನೆಗಳ ದಂಡು; ವಿಡಿಯೋ ವೈರಲ್​

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ