AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು
ಸಾಂದರ್ಭಿಕ ಚಿತ್ರ
Lakshmi Hegde
|

Updated on: Apr 25, 2021 | 3:42 PM

Share

ಕೊವಿಡ್​-19 ಸೋಂಕಿನಿಂದಾಗಿ ಮದುವೆ ಸೇರಿ ಯಾವುದೇ ಶುಭಸಮಾರಂಭಗಳನ್ನು ನಡೆಸುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಆದರೂ ಜನ ಮಾತ್ರ ಹೊಸಹೊಸ ರೀತಿಯಲ್ಲಿ ಮದುವೆ ಸಮಾರಂಭ ನಡೆಸುತ್ತಲೇ ಇದ್ದಾರೆ. ಇದೀಗ ಕೇರಳದಲ್ಲಿ ಜೋಡಿಯೊಂದು ಕೊವಿಡ್​-19 ಆಸ್ಪತ್ರೆ ವಾರ್ಡ್​​ನಲ್ಲೇ ವಿವಾಹವಾಗಿ ದೇಶದ ಗಮನಸೆಳೆದಿದೆ.

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಮುಹೂರ್ತ ತಪ್ಪಿಸಲು ಇಷ್ಟವಿಲ್ಲದೆ ವಧು ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಗೇ ಬಂದು ವಿವಾಹವಾಗಿದ್ದಾರೆ. ಶರತ್​ ಹಾಗೂ ಅಭಿರಾಮಿ ಇಬ್ಬರೂ ಕೈಂಕರಿ ನಿವಾಸಿಗಳಾಗಿದ್ದಾರೆ.

ಶರತ್​ ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಮದುವೆ ಫಿಕ್ಸ್ ಆಗಿ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರ ತಾಯಿಗೂ ಸೋಂಕು ತಗುಲಿದೆ. ತಾಯಿ-ಮಗ ಇಬ್ಬರನ್ನೂ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ಸೆಂಟರ್​ನಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್​ 25ರಂದು ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡುವುದು ಬೇಡ ಎಂದು ಎರಡೂ ಕುಟುಂಬಸ್ಥರು ನಿರ್ಧರಿಸಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು, ಕೊವಿಡ್ 19 ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ತುಂಬ ಜನ ಸೇರಿರಲಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಅಲ್ಲೇ ಇದ್ದ ವರನ ತಾಯಿ, ಹೊಸ ಜೋಡಿ ಹೂಗುಚ್ಛ ನೀಡಿ ಶುಭ ಹಾರೈಸಿದರು ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನೂ ಓದಿ: ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?

ತೆಲುಗಿನಲ್ಲಿ ಮಿಂಚಲಿದ್ದಾರೆ ಮಳಯಾಳಂ ನಟಿ ನಜ್ರಿಯಾ ನಜೀಮ್…!

couple in Kerala tied the knot inside a Covid ward Of Alappuzha Media College after groom testes positive for coronavirus

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್