AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು
ಸಾಂದರ್ಭಿಕ ಚಿತ್ರ
Lakshmi Hegde
|

Updated on: Apr 25, 2021 | 3:42 PM

Share

ಕೊವಿಡ್​-19 ಸೋಂಕಿನಿಂದಾಗಿ ಮದುವೆ ಸೇರಿ ಯಾವುದೇ ಶುಭಸಮಾರಂಭಗಳನ್ನು ನಡೆಸುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಆದರೂ ಜನ ಮಾತ್ರ ಹೊಸಹೊಸ ರೀತಿಯಲ್ಲಿ ಮದುವೆ ಸಮಾರಂಭ ನಡೆಸುತ್ತಲೇ ಇದ್ದಾರೆ. ಇದೀಗ ಕೇರಳದಲ್ಲಿ ಜೋಡಿಯೊಂದು ಕೊವಿಡ್​-19 ಆಸ್ಪತ್ರೆ ವಾರ್ಡ್​​ನಲ್ಲೇ ವಿವಾಹವಾಗಿ ದೇಶದ ಗಮನಸೆಳೆದಿದೆ.

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಮುಹೂರ್ತ ತಪ್ಪಿಸಲು ಇಷ್ಟವಿಲ್ಲದೆ ವಧು ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಗೇ ಬಂದು ವಿವಾಹವಾಗಿದ್ದಾರೆ. ಶರತ್​ ಹಾಗೂ ಅಭಿರಾಮಿ ಇಬ್ಬರೂ ಕೈಂಕರಿ ನಿವಾಸಿಗಳಾಗಿದ್ದಾರೆ.

ಶರತ್​ ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಮದುವೆ ಫಿಕ್ಸ್ ಆಗಿ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರ ತಾಯಿಗೂ ಸೋಂಕು ತಗುಲಿದೆ. ತಾಯಿ-ಮಗ ಇಬ್ಬರನ್ನೂ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ಸೆಂಟರ್​ನಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್​ 25ರಂದು ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡುವುದು ಬೇಡ ಎಂದು ಎರಡೂ ಕುಟುಂಬಸ್ಥರು ನಿರ್ಧರಿಸಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು, ಕೊವಿಡ್ 19 ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ತುಂಬ ಜನ ಸೇರಿರಲಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಅಲ್ಲೇ ಇದ್ದ ವರನ ತಾಯಿ, ಹೊಸ ಜೋಡಿ ಹೂಗುಚ್ಛ ನೀಡಿ ಶುಭ ಹಾರೈಸಿದರು ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನೂ ಓದಿ: ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?

ತೆಲುಗಿನಲ್ಲಿ ಮಿಂಚಲಿದ್ದಾರೆ ಮಳಯಾಳಂ ನಟಿ ನಜ್ರಿಯಾ ನಜೀಮ್…!

couple in Kerala tied the knot inside a Covid ward Of Alappuzha Media College after groom testes positive for coronavirus

Follow Us
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ