AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?

ತನ್ನ ಕೆಲಸವನ್ನೂ ಪ್ರತಿಯೊಬ್ಬರ ಬಳಿ ಬೇರೆಬೇರೆಯದಾಗೇ ಹೇಳಿಕೊಂಡಿದ್ದ. ಪ್ರತಿ ಯುವತಿಯ ಬಳಿಯೂ ನಿನ್ನನ್ನೇ ಮದುವೆಯಾಗುವುದು ಎಂದು ನಂಬಿಸಿದ್ದ. ಅದರಲ್ಲೂ ಶ್ರೀಮಂತ ಯುವತಿಯರ ಬೆನ್ನೇ ಬಿದ್ದಿದ್ದ.

ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?
ಬಂಧಿತ ಆರೋಪಿ
Lakshmi Hegde
|

Updated on: Apr 25, 2021 | 3:25 PM

Share

ಬರೋಬ್ಬರಿ 35 ಮಹಿಳೆಯರೊಟ್ಟಿಗೆ ಏಕಕಾಲಕ್ಕೆ ಡೇಟಿಂಗ್ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವರ್ಷಪೂರ್ತಿ ಬರ್ತ್​ ಡೇ ಗಿಫ್ಟ್ ಪಡೆಯುವುದಕ್ಕೋಸ್ಕ ಈ ವ್ಯಕ್ತಿ ಇಂಥ ಐಡಿಯಾ ಮಾಡಿದ್ದ..35 ಜನರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿ ಹೇಳಿಕೊಂಡಿದ್ದ ಈ ಅಷ್ಟೂ ಮಹಿಳೆಯರನ್ನು ವಂಚಿಸಿದ್ದ.

ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಜಪಾನ್​​ನಲ್ಲಿ. 39ವರ್ಷದ ತಕಾಶಿ ಮಿಯಾಗಾವಾ ದಕ್ಷಿಣ ಜಪಾನ್​ನ ಕನ್ಸೈ ಎಂಬ ಪ್ರದೇಶದ ನಿವಾಸಿ. ಹಾಗಂತ ಈತನಿಗೇನೂ ಒಂದು ನಿರ್ದಿಷ್ಟ ವಿಳಾಸ ಇರಲಿಲ್ಲ. 35 ಮಹಿಳೆಯರೊಂದಿಗೆ ಡೇಟಿಂಗ್​ ಮಾಡುತ್ತಿದ್ದ ಈತ, ಪ್ರತಿಯೊಬ್ಬರ ಬಳಿಯೂ, ನಾನು ನಿನ್ನನ್ನು ತುಂಬ ಇಷ್ಟಪಡುತ್ತೇನೆ ಎಂದೇ ಹೇಳಿಕೊಂಡಿದ್ದ. ವರ್ಷಪೂರ್ತಿ ಒಬ್ಬರಲ್ಲ ಒಬ್ಬರಿಂದ ಬೆಲೆಬಾಳುವ ಉಡುಗೋರೆ ಪಡೆಯುವ ಸಲುವಾಗಿ 35 ಯುವತಿಯರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿಯೇ ಹೇಳಿಕೊಂಡಿದ್ದ. ಈತನ ನಿಜವಾದ ಹುಟ್ಟುಹಬ್ಬ ನವೆಂಬರ್ 13ರಂದು ಆದರೂ, ವರ್ಷದ ಎಲ್ಲ ತಿಂಗಳಲ್ಲೂ ಹೊಂದಿಸಿ ಬರ್ತ್ ಡೇಟ್​ ಸೃಷ್ಟಿ ಮಾಡಿಕೊಂಡಿದ್ದರಿಂದ ತಿಂಗಳಲ್ಲಿ ಮೂರರಂತೆ ವರ್ಷಕ್ಕೆ 35 ಗಿಫ್ಟ್ ಪಕ್ಕಾ ಆಗಿತ್ತು. ಹಾಗೇ, ಆತನ ಗರ್ಲ್​ಫ್ರೆಂಡ್ಸ್ ಅವನಿಗಾಗಿ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿದ್ದರು.

ಹಾಗೇ, ತನ್ನ ಕೆಲಸವನ್ನೂ ಪ್ರತಿಯೊಬ್ಬರ ಬಳಿ ಬೇರೆಬೇರೆಯದಾಗೇ ಹೇಳಿಕೊಂಡಿದ್ದ. ಪ್ರತಿ ಯುವತಿಯ ಬಳಿಯೂ ನಿನ್ನನ್ನೇ ಮದುವೆಯಾಗುವುದು ಎಂದು ನಂಬಿಸಿದ್ದ. ಅದರಲ್ಲೂ ಶ್ರೀಮಂತ ಯುವತಿಯರ ಬೆನ್ನೇ ಬಿದ್ದಿದ್ದ. ಹಾಗಾಗಿ ಅದೆಷ್ಟೋ ಬೆಲೆಬಾಳುವ ಉಡುಗೊರೆಗಳನ್ನು ಪಡೆದಿದ್ದ. ಆದರೆ ಈತ ಕಳ್ಳಾಟ ಅದು ಹೇಗೋ ಯುವತಿಯರಿಗೆ ಗೊತ್ತಾಗಿ, ಎಲ್ಲರೂ ಸೇರಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್​ ಅಭಾವ ನೀಗಿಸಲು ಕೇಂದ್ರ ಸರ್ಕಾರದಿಂದ ಕ್ರಮ; ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ

ಹಂಪಿಯ ಬಡವಿಲಿಂಗ ಅರ್ಚಕ ಕೆ.ಎನ್.ಕೃಷ್ಣ ಭಟ್ ಇನ್ನಿಲ್ಲ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ