AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮ್ಯಾನ್​ಹೋಲ್​ಗೆ ಬಿದ್ದ ಆನೆ ಮರಿಯ ರಕ್ಷಣೆ ವೇಳೆ ಉನ್ಮಾದದಿಂದ ಕುಸಿದುಬಿದ್ದ ತಾಯಿ ಆನೆ

ತನ್ನ ಮರಿ ಮ್ಯಾನ್​ಹೋಲ್​ಗೆ ಬಿದ್ದಾಗ ತಾಯಿ ಆನೆ ಉನ್ಮಾದಗೊಂಡು ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Viral Video: ಮ್ಯಾನ್​ಹೋಲ್​ಗೆ ಬಿದ್ದ ಆನೆ ಮರಿಯ ರಕ್ಷಣೆ ವೇಳೆ ಉನ್ಮಾದದಿಂದ ಕುಸಿದುಬಿದ್ದ ತಾಯಿ ಆನೆ
ಮ್ಯಾನ್​ಹೋಲ್​ಗೆ ಬಿದ್ದ ಆನೆಗಳ ರಕ್ಷಣೆ
TV9 Web
| Edited By: Rakesh Nayak Manchi|

Updated on:Jul 15, 2022 | 5:52 PM

Share

ತಾಯಿಯ ಸಂಬಂಧವೇ ಹಾಗೆ, ಮಗುವಿಗೆ ಏನಾದರೂ ಆದರೆ ಅಳುತ್ತಾಳೆ, ಚೀರುತ್ತಾಳೆ ಅಥವಾ ಮೂರ್ಛೆ ಹೋಗುತ್ತಾಳೆ. ಇಂತಹ ಘಟನೆಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ನಡೆಯುತ್ತದೆ. ಇದಕ್ಕೆ ಸಾಕ್ಷಿ ಥಾಯ್ಲೆಂಡ್​ನ ಆನೆ. ತನ್ನ ಮರಿ ಮ್ಯಾನ್​ಹೋಲ್​ಗೆ ಬಿದ್ದಾಗ ತಾಯಿ ಆನೆ (Elephant) ಉನ್ಮಾದಗೊಂಡು ಕುಸಿದು ಬಿದ್ದಿದೆ. ಸದ್ಯ  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (video viral) ಆಗುತ್ತಿದೆ.

ಸಿಬಿಎಸ್ ನ್ಯೂಸ್ ಪ್ರಕಾರ, ಥಾಯ್ಲೆಂಡ್​ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮರಿ ಆನೆಯೊಂದು ಒಳಚರಂಡಿ ತೊಟ್ಟಿಗೆ ಜಾರಿ ಬಿದ್ದು ಸಹಾಯಕ್ಕಾಗಿ ಜೋರಾಗಿ ಘೀಳಿಡಲು ಪ್ರಾರಂಭಿಸಿದೆ. ಇನ್ನೊಂದೆಡೆ ತನ್ನ ಮರಿಯ ರಕ್ಷಣೆಯ ಒತ್ತಡಕ್ಕೆ ಬಿದ್ದ ತಾಯಿ ಆನೆ ಕೂಡ ಮ್ಯಾನ್​ಹೋಲ್​ಗೆ ಬಿದ್ದಿದೆ. ಈ ಬಗ್ಗೆ ದಾರಿಹೋಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ತೀವ್ರ ಒತ್ತಡದಲ್ಲಿದ್ದ ತಾಯಿಗೆ ಅರಿವಳಿಕೆ ಮದ್ದು ನೀಡಿದರು.

ಅದರಂತೆ ರಕ್ಷಣಾ ತಂಡವು ಕ್ರೇನ್ ಸಹಾಯದಿಂದ ದೊಡ್ಡ ಆನೆಯನ್ನು ಮ್ಯಾನ್​ಹೋಲ್​ನಿಂದ ಎತ್ತಿದರು. ಅರವಳಿಕೆ ನೀಡಿದ್ದರಿಂದಾಗಿ ಪ್ರಜ್ಞೆ ತಪ್ಪಿದ್ದ ದೊಡ್ಡ ಆನೆಗೆ ಸಿಪಿಆರ್ ಮಾಡಿ ಮತಿಬರಿಸುವ ಪ್ರಯತ್ನದ ನಡುವೆ ಮ್ಯಾನ್​ಹೋಲ್​ನಲ್ಲಿದ್ದ 1 ವರ್ಷದ ಆನೆ ಮರಿ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ಆ ಮೂಲಕ ಆನೆಮರಿ ಮೇಲ್ಬಂದು ತಾಯಿಯ ಬಳಿ ಹೋಯಿತು. ಮತಿ ಬಂದ ನಂತರ ತಾಯಿಯು ತನ್ನ ಮರಿಯೊಂದಿಗೆ ಕಾಡಿಗೆ ನಡೆದುಕೊಂಡು ಹೋಗಿದೆ.

ಇದರ ವಿಡಿಯೋ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ 1.5 ಲಕ್ಷ ವೀಕ್ಷಣೆಗಳನ್ನು ಗಳಿಸಿದ್ದು, 60ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ರಕ್ಷಣಾ ತಂಡ ಕೈಗೊಂಡ ತ್ವರಿತ ಕ್ರಮವನ್ನು ನೆಟಿಜನ್‌ಗಳು ಶ್ಲಾಘಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು, “ಅದ್ಭುತ! ಆ ಜನರು ನಿಜವಾದ ಹೀರೋಗಳು” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಆನೆ ರಕ್ಷಕರನ್ನು ಹೀರೋಗಳು ಎಂದು ಕರೆದಿದ್ದಾರೆ.

Published On - 5:52 pm, Fri, 15 July 22

Follow Us
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ