ಅಖಾಡದಲ್ಲಿ ಬಿದ್ದು ಕಾಲು ಮುರಿದ್ರೂ ಎದ್ದು ಗುರಿ ಮುಟ್ಟಿದ ಹೋರಿ: ತಬ್ಬಿ ಕಣ್ಣೀರಿಟ್ಟ ಮಾಲೀಕ

Updated on: Oct 23, 2025 | 10:36 PM

ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು.

ಹಾವೇರಿ, ಅಕ್ಟೋಬರ್ 23): ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು. ಈ ಭಾವನಾತ್ಮಕ ಘಟನೆ ನೋಡಿ ನೆರೆದಿದ್ದ ಜನರು ಸಹ ಭಾವುಕರಾದರು. ಇನ್ನು ಹೋರಿ ಬಿದ್ದು ಕಾಲು ಮುರಿದರೂ ಸಹ ಓಡಿರುವ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಸದ್ಯ ಒಂದು ಕಾಲು ಮುರಿದುಕೊಂಡಿರುವ ಹೋರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Published on: Oct 23, 2025 10:26 PM
Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More