Girl student takes on the government: ಗ್ಯಾರಂಟಿಗಳನ್ನು ಈಡೇರಿಸಲಾಗದಿದ್ದರೆ ನೀಡೋದಾದರೂ ಯಾಕೆ, ಸರ್ಕಾರವನ್ನು ಪ್ರಶ್ನಿಸಿದ ಬಾಗಲಕೋಟೆ ವಿದ್ಯಾರ್ಥಿನಿ
ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಗ್ಗುರಿಸುವುದು ಗ್ಯಾರಂಟಿ ಎಂದು ಜ್ಯೋತಿ ಹೇಳುತ್ತಾಳೆ.
ಬಾಗಲಕೋಟೆ: ಶಾಲಾ ಕಾಲೇಜುಗಳು ಪುನರಾರಂಭಗೊಂಡಿವೆ ಮತ್ತು ವಿದ್ಯಾರ್ಥಿನಿಯರು ಗೊಂದಲದಲ್ಲಿದ್ದಾರೆ. ಸರ್ಕಾರ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ (free bus pass) ಭರವಸೆ ನೀಡಿದೆ. ಆದರೆ ಆ ಗ್ಯಾರಂಟಿ (guarantee) ಜಾರಿಗೊಳ್ಳಲು ವಿಳಂಬವಾಗುತ್ತಿದೆ. ಸರ್ಕಾರದ ಭರವಸೆಯನ್ನು ನೆಚ್ಚಿಕೊಂಡು ಕೂರುವ ಬದಲು ತಮ್ಮ ಬಸ್ ಪಾಸ್ ಗಳನ್ನು ನವೀಕರಿಸಿಕೊಳ್ಳುವುದೇ ಬೆಟರ್ ಅಂದುಕೊಂಡಿರುನ ನಗರದ ವಿದ್ಯಾರ್ಥಿನಿಯರು ನಗರದ ಬಸ್ ನಿಲ್ದಾಣದಲ್ಲಿ ಸರತಿ ಸಾಲಲ್ಲಿ ನಿಂತಿದ್ದಾರೆ. ಏತನ್ಮಧ್ಯೆ, ಜ್ಯೋತಿ ಬಸನಗೌಡ್ (Jyoti Basangooud) ಹೆಸರಿನ ವಿದ್ಯಾರ್ಥಿನಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆಶ್ವಾಸಗಳನ್ನು ಈಡೇರಿಸಲು ಸಾಧ್ಯವಾಗದು ಅಂತಾದರೆ ಕೊಡೋದಾದರೂ ಯಾಕೆ, ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಗ್ಗುರಿಸುವುದು ಗ್ಯಾರಂಟಿ ಎಂದು ಜ್ಯೋತಿ ಹೇಳುತ್ತಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
