ವಿಜಯಪುರದಿಂದ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ ಗೌಸ್ ಮೊಹಿಯುದ್ದೀನ್ ಮತ್ತವರ ಮಗಳು ಹಾಜಿರ

ದೇವನೊಬ್ಬ ನಾಮ ಹಲವು ಅಂತ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದನ್ನು ಗೌಸ್ ಪುನರುಚ್ಛರಿಸಿ ತಮಗೆ ಯಾವುದೇ ದೇವ ದೇವತೆಯರ ಬಗ್ಗೆ ಭೇದಭಾವ ಇಲ್ಲ ಅನ್ನುತ್ತಾರೆ. ಹಿಂದೂ-ಮುಸ್ಲಿಂ ಜಗಳ, ಮತೀಯ ಗಲಭೆ ಸ್ವಾಭಾವಿಕ ಅನ್ನುವ ಮಟ್ಟಿಗೆ ಜನರು ಮೆದುಳನ್ನು ಟ್ಯೂನ್ ಮಾಡಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಗೌಸ್ ಮತ್ತು ಹಾಜಿರ ಸರ್ವಧರ್ಮ ಸಮನ್ವಯತೆಯ ಪ್ರತಿನಿಧಿಗಳಾಗಿ ಗೋಚರವಾಗುತ್ತಾರೆ.

ವಿಜಯಪುರದಿಂದ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ ಗೌಸ್ ಮೊಹಿಯುದ್ದೀನ್ ಮತ್ತವರ ಮಗಳು ಹಾಜಿರ
|

Updated on: Nov 06, 2023 | 1:01 PM

ಹಾಸನ: ಈ ತಂದೆ ಮತ್ತು ಮಗಳನ್ನು ನೋಡಿ ಮಾರಾಯ್ರೇ. ತಂದೆಯ ಹೆರು ಗೌಸ್ ಮೊಹಿಯುದ್ದೀನ್ (Ghouse Mohiuddin)ಮತ್ತು ಮಗಳು ಹಜೀರ (Hajira). ಗೌಸ್ ಕೆಪಿಟಿಸಿಎಲ್ ಉದ್ಯೋಗಿಯಾಗಿದ್ದರೆ ಹಾಜಿರ ಸಹ ಯಾವುದೋ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ದೂರದ ವಿಜಯಪುರದಿಂದ ಇವರು ಹಾಸನಾಂಬೆಯ ದರ್ಶನ ಪಡೆಯಲು ಹಾಸನಕ್ಕೆ ಬಂದಿದ್ದಾರೆ. ಹಾಸನಾಂಬೆಯ ದರ್ಶನ (Hasanambe Darshana) ಮಾಡಿದರೆ ಒಳ್ಳ್ಳೆಯದಾಗುತ್ತದೆ ಎಂಬ ನಂಬಿಕೆ ತಮಗೆ ಇರುವ ಕಾರಣ ದರ್ಶನಕ್ಕೆ ಬಂದಿರುವುದಾಗಿ ಗೌಸ್ ಮತ್ತು ಹಾಜಿರ ಇಬ್ಬರೂ ಹೇಳುತ್ತಾರೆ. ದೇವನೊಬ್ಬ ನಾಮ ಹಲವು ಅಂತ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದನ್ನು ಗೌಸ್ ಪುನರುಚ್ಛರಿಸಿ ತಮಗೆ ಯಾವುದೇ ದೇವ ದೇವತೆಯರ ಬಗ್ಗೆ ಭೇದಭಾವ ಇಲ್ಲ ಅನ್ನುತ್ತಾರೆ. ಹಿಂದೂ-ಮುಸ್ಲಿಂ ಜಗಳ, ಮತೀಯ ಗಲಭೆ ಸ್ವಾಭಾವಿಕ ಅನ್ನುವ ಮಟ್ಟಿಗೆ ಜನರು ಮೆದುಳನ್ನು ಟ್ಯೂನ್ ಮಾಡಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಗೌಸ್ ಮತ್ತು ಹಾಜಿರ ಸರ್ವಧರ್ಮ ಸಮನ್ವಯತೆಯ ಪ್ರತಿನಿಧಿಗಳಾಗಿ ಗೋಚರವಾಗುತ್ತಾರೆ. ಇದೇ ಮೊದಲ ಸಲ ಹಾಸನಾಂಬೆ ದರ್ಶನಕ್ಕೆ ಬಂದಿರುವ ಹಾಜಿರಗೆ ಸಹೋದ್ಯೋಗಿಗಳಿಂದ ಹಾಸನಾಂಬೆ ಉತ್ಸವದ ಬಗ್ಗೆ ಗೊತ್ತಾಗಿದೆಯಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ