AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka budget session: ಗೋಹತ್ಯೆ ನಿಷೇಧ ಕಾಯ್ದೆ ಮೇಲೆ ಆವೇಶದಲ್ಲಿ ಮಾತಾಡುತ್ತಿದ್ದ ಸಿದ್ದರಾಮಯ್ಯನವರನ್ನು ಚೀಟಿಯಲ್ಲಿ ಬಂದ ಸಂದೇಶ ಬ್ರೇಕ್ ಹಾಕಿತು!

Karnataka budget session: ಗೋಹತ್ಯೆ ನಿಷೇಧ ಕಾಯ್ದೆ ಮೇಲೆ ಆವೇಶದಲ್ಲಿ ಮಾತಾಡುತ್ತಿದ್ದ ಸಿದ್ದರಾಮಯ್ಯನವರನ್ನು ಚೀಟಿಯಲ್ಲಿ ಬಂದ ಸಂದೇಶ ಬ್ರೇಕ್ ಹಾಕಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 14, 2023 | 5:09 PM

Share

ಅದನ್ನು ಓದಿದ ಬಳಿಕ ಸಿದ್ದರಾಮಯ್ಯ, ಊಟದ ಬಳಿಕ ಚರ್ಚೆಯನ್ನು ಮುಂದುವರಿಸೋಣ ಅಂತ ಸಭಾಧ್ಯಕ್ಷರಿಗೆ ಮನವಿ ಮಾಡಿ ವಿಷಯದ ಮೇಲೆ ಚರ್ಚೆ ಮಾಡಲು ತಮಗೆ ಅವಾಕಾಶ ನೀಡಬೇಕೆಂದು ಹೇಳುತ್ತಾರೆ.

ಬೆಂಗಳೂರು: ವಿಧಾನ ಮಂಡಲದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಹುನುಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ (Doddangouda Patil) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಜುಗಲ್ ಬಂದಿ ಶುರುವಾದ ಕೊಂಚ ಹೊತ್ತಿನಲ್ಲೇ ಹಠಾತ್ತಾಗಿ ನಿಂತು ಹೋಯಿತು. ರಾಸುಗಳ (cattle) ಬಗ್ಗೆ ದೊಡ್ಡನಗೌಡರು ಅಡುತ್ತಿದ್ದ ಮಾತನ್ನು ಆರ್ಧದಲ್ಲೇ ತುಂಡರಿಸಿ ಮಾತಾಡಲು ಶುರುಮಾಡಿದ ಸಿದ್ದರಾಮಯ್ಯ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಗೋಹತ್ಯೆ ನಿಷೇಧ ಕಾಯ್ದೆ, ಅದನ್ನು ತೆಗೆದುಹಾಕಿ ಅಂತ ಹೇಳಿದರು. ಸಮಸ್ಯೆ ಉದ್ಭವಿಸಿರೋದು ಬಿಜೆಪಿಯ ಕೋಮುವಾದಿ ಅಜೆಂಡಾದಿಂದ ಅವರು ಹೇಳುತ್ತಿರುವಾಗಲೇ ಒಂದು ಪೇಪರ್ ನಲ್ಲಿ ಅವರಿಗೊಂದು ಸಂದೇಶ ಬರುತ್ತದೆ. ಅದನ್ನು ಓದಿದ ಬಳಿಕ ಸಿದ್ದರಾಮಯ್ಯ, ಊಟದ ಬಳಿಕ ಚರ್ಚೆಯನ್ನು ಮುಂದುವರಿಸೋಣ ಅಂತ ಸಭಾಧ್ಯಕ್ಷರಿಗೆ ಮನವಿ ಮಾಡಿ ವಿಷಯದ ಮೇಲೆ ಚರ್ಚೆ ಮಾಡಲು ತಮಗೆ ಅವಾಕಾಶ ನೀಡಬೇಕೆಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More