AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udupi News: ಸೆಲ್ಫೀ ಗೀಳಿಗಾಗಿ ಸಮುದ್ರಕ್ಕಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುತ್ತಾ ಸಲಹೆ ನೀಡಿದ ಉಡುಪಿಯ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್

Udupi News: ಸೆಲ್ಫೀ ಗೀಳಿಗಾಗಿ ಸಮುದ್ರಕ್ಕಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುತ್ತಾ ಸಲಹೆ ನೀಡಿದ ಉಡುಪಿಯ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 25, 2023 | 12:55 PM

Share

ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!

ಉಡುಪಿ: ಸೆಲ್ಫೀ ಹುಚ್ಚಾಟಗಳ ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಜಲಪಾತಗಳ ಬಳಿ ಉಕ್ಕಿ ಹರಿಯುತ್ತಿರುವ ನದಿಗಳ ಸೇತುವೆಗಳ ಮೇಲೆ, ಸಮುದ್ರ ತೀರದಲ್ಲಿ-ಹೀಗೆ ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಸ್ಥಳಗಳಲ್ಲಿ (dangerous places) ಜನ ತಮ್ಮ ಜೀವಗಳನ್ನು ಪಣಕ್ಕಿಟ್ಟು ಸೆಲ್ಫೀ (selfie) ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಉಡುಪಿ ಸಮುದ್ರ ತೀರದಲ್ಲಿ ಕೆಲ ಪ್ರವಾಸಿಗರು ಸೆಲ್ಫೀ ಹುಚ್ಚಾಟಕ್ಕಿಳಿದಿದ್ದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಆರ್ ನಾಯ್ಕ್ (Harish R Naik) ಹುಚ್ಚು ಸಾಹಸಗಳನ್ನು ಮಾಡದಂತೆ ಎಚ್ಚರಿಸಿದ್ದಾರೆ. ಈ ತೀರದಲ್ಲಿ ಇತ್ತೀಚಿಗೆ ಯುವಕನೊಬ್ಬ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಸಮುದ್ರ ಪಾಲಾಗಿದ್ದನ್ನು ಅವರು ಪ್ರವಾಸಕ್ಕೆ ಬಂದವರಿಗೆ ತಿಳಿಸುತ್ತಾರೆ. ತೀರದಲ್ಲಿ ಹಾಕಿರುವ ಎಚ್ಚರಿಕೆಯ ಬೋರ್ಡ್ ಅನ್ನು ಗೌರವಿಸುವಂತೆಯೂ ಅವರು ತಿಳಿ ಹೇಳುತ್ತಾರೆ. ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.