Udupi News: ಸೆಲ್ಫೀ ಗೀಳಿಗಾಗಿ ಸಮುದ್ರಕ್ಕಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುತ್ತಾ ಸಲಹೆ ನೀಡಿದ ಉಡುಪಿಯ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್
ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!
ಉಡುಪಿ: ಸೆಲ್ಫೀ ಹುಚ್ಚಾಟಗಳ ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಜಲಪಾತಗಳ ಬಳಿ ಉಕ್ಕಿ ಹರಿಯುತ್ತಿರುವ ನದಿಗಳ ಸೇತುವೆಗಳ ಮೇಲೆ, ಸಮುದ್ರ ತೀರದಲ್ಲಿ-ಹೀಗೆ ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಸ್ಥಳಗಳಲ್ಲಿ (dangerous places) ಜನ ತಮ್ಮ ಜೀವಗಳನ್ನು ಪಣಕ್ಕಿಟ್ಟು ಸೆಲ್ಫೀ (selfie) ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಉಡುಪಿ ಸಮುದ್ರ ತೀರದಲ್ಲಿ ಕೆಲ ಪ್ರವಾಸಿಗರು ಸೆಲ್ಫೀ ಹುಚ್ಚಾಟಕ್ಕಿಳಿದಿದ್ದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಆರ್ ನಾಯ್ಕ್ (Harish R Naik) ಹುಚ್ಚು ಸಾಹಸಗಳನ್ನು ಮಾಡದಂತೆ ಎಚ್ಚರಿಸಿದ್ದಾರೆ. ಈ ತೀರದಲ್ಲಿ ಇತ್ತೀಚಿಗೆ ಯುವಕನೊಬ್ಬ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಸಮುದ್ರ ಪಾಲಾಗಿದ್ದನ್ನು ಅವರು ಪ್ರವಾಸಕ್ಕೆ ಬಂದವರಿಗೆ ತಿಳಿಸುತ್ತಾರೆ. ತೀರದಲ್ಲಿ ಹಾಕಿರುವ ಎಚ್ಚರಿಕೆಯ ಬೋರ್ಡ್ ಅನ್ನು ಗೌರವಿಸುವಂತೆಯೂ ಅವರು ತಿಳಿ ಹೇಳುತ್ತಾರೆ. ಸಾಮಾನ್ಯವಾಗಿ ಜನ ಇಂಥ ಸೂಚನಾ ಫಲಕಗಳನ್ನು ಕಡೆಗಣಿಸುತ್ತಾರೆ, ಈ ಎಚ್ಚರಿಕೆ ತಮಗಲ್ಲ ಬೇರೆ ಗ್ರಹದವರಿಗೆ ಅಂತ ಭಾವಿಸುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು

