ಈ ಗಂಡ ಹೆಂಡ್ತಿ ಜಗಳ ಕಾರಿಗೆ ಬೆಂಕಿ ಹಚ್ಚುವ ತನಕ: ಪತ್ನಿ ಕೃತ್ಯಕ್ಕೆ ಕಣ್ಣೀರಿಟ್ಟ ಪತಿ

Updated on: Oct 09, 2025 | 6:30 PM

ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂದು ಈ ಹಿಂದೆ ಹಿರಿಯರು ಹೇಳಿದ್ರು. ಆದ್ರೆ, ಈ ದಂಪತಿ ಕಲಹ ಕಾರು ಸುಡುವ ತನಕ ಹೋಗಿದೆ. ಹೌದು... ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹೆಂಡತಿಯೇ ಕಟ್ಟಿಕೊಂಡ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿ, (ಅಕ್ಟೋಬರ್ 09): ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂದು ಈ ಹಿಂದೆ ಹಿರಿಯರು ಹೇಳಿದ್ರು. ಆದ್ರೆ, ಈ ದಂಪತಿ ಕಲಹ ಕಾರು ಸುಡುವ ತನಕ ಹೋಗಿದೆ. ಹೌದು… ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹೆಂಡತಿಯೇ ಕಟ್ಟಿಕೊಂಡ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವನಗೌಡ ಪಾಟೀಲ್ ಹಾಗೂ ಪತ್ನಿ ಸಾವಿತ್ರಿ ಪಾಟೀಲ್ ಆಸ್ತಿ, ಹಣಕ್ಕಾಗಿ ಮನೆಯಲ್ಲಿ ಕಿತ್ತಾಡುತ್ತಿದ್ದರು. ಆದ್ರೆ, ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಪತ್ನಿ ಪೆಟ್ರೋಲ್​ ಸುರಿದು ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಕಾರಿಗೆ ಬೆಂಕಿ ಬೀಳ್ತಿದ್ದಂತೆ ಪತಿ ಶಿವನಗೌಡ ಪಾಟೀಲ್ ಕಿರುಚಾಡಿದ್ದಾರೆ. ಆದ್ರೆ ಅತ್ತ ಕಾರು ಮಾತ್ರ ಸುಟ್ಟು ಕರಕಲಾಗಿದೆ. ಪತ್ನಿಯ ಈ ಕೆಲಸಕ್ಕೆ ಗಂಡ ಶಿವನಗೌಡ ಪಾಟೀಲ್ ಕಣ್ಣೀರಿಟ್ಟಿದ್ದು, ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More