ಅಂಬರೀಷ್ ಪುಣ್ಯಸ್ಮರಣೆ: ಸಮಾಧಿ ಎದುರು ಅಮ್ಮನ ತಬ್ಬಿದ ಅಭಿಷೇಕ್

|

Updated on: Nov 24, 2023 | 12:57 PM

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸಮಾಧಿಗೆ ಸುಮಲತಾ, ಅಭಿಷೇಕ್ ಅಂಬರೀಷ್, ರಾಕ್​ಲೈನ್ ವೆಂಕಟೇಶ್ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಯನ್ನು ನೆನದು ಅಮ್ಮನ ತಬ್ಬಿದ್ದಾರೆ ಅಭಿಷೇಕ್.

ಇಂದು (ನವೆಂಬರ್ 24) ಅಂಬರೀಷ್ (Ambareesh) ಅವರ ಐದನೇ ವರ್ಷ ಪುಣ್ಯಸ್ಮರಣೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸಮಾಧಿಗೆ ಸುಮಲತಾ, ಅಭಿಷೇಕ್ ಅಂಬರೀಷ್, ರಾಕ್​ಲೈನ್ ವೆಂಕಟೇಶ್ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಯನ್ನು ನೆನದು ಅಮ್ಮನ ತಬ್ಬಿದ್ದಾರೆ ಅಭಿಷೇಕ್. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ‘ಅಂಬಿ ನಮ್ಮ ಜೊತೆ ಇರಬೇಕಿತ್ತು’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಂಬರೀಷ್ ಪುಣ್ಯಸ್ಮರಣೆಯ ದಿನದಂದೇ ಅಭಿಷೇಕ್ ಅವರ ಹೊಸ ಸಿನಿಮಾ ‘ಬ್ಯಾಡ್ ಮ್ಯಾನರ್ಸ್​’ ರಿಲೀಸ್ ಆಗಿದೆ ಅನ್ನೋದು ವಿಶೇಷ. ‘ದುನಿಯಾ’ ಸೂರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ
ಇದನ್ನೂ ಓದಿ:

Follow us on