ಸುಮಾರು 30 ವರ್ಷಗಳ ಹಿಂದೆ ನನ್ನಿಂದ ರೂ. 50,000 ಸಾಲ ಪಡೆದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ರೂ. 500 ಕೋಟಿ ಒಡತಿ ಹೇಗಾದರು? ಸಂಜಯ ಪಾಟೀಲ್

Updated on: Mar 04, 2023 | 10:41 AM

ಪಾಟೀಲ್ ಮಾಡಿದ ಗುರುತರವಾದ ಅರೋಪಗಳಲ್ಲಿ ಒಂದೆಂದರೆ ಸುಮಾರು 20-30 ವರ್ಷಗಳ ಹಿಂದೆ ಶಾಸಕಿ ತನ್ನ ಕಚೇರಿಗೆ ಬಂದು 50,000 ರೂಪಾಯಿ ಕೈಸಾಲ ತೆಗೆದುಕೊಂಡು ಹೋಗಿ ವಾಪಸ್ಸು ಕೊಡದಿರುವುದು.

ಬೆಳಗಾವಿ: ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ (Belagavi Rural) ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಸೋತಿದ್ದ ಬಿಜೆಪಿ ನಾಯಕ ಸಂಜಯ ಪಾಟೀಲ್ (Sanjay Patil) ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡಸಿ ಶಾಸಕಿಯ ವಿರುದ್ಧ ತೀವ್ರ ಗದಾಪ್ರಹಾರ ನಡೆಸಿದರು. ಹೆಬ್ಬಾಳ್ಕರ್ ವಿರುದ್ಧ ಪಾಟೀಲ್ ಮಾಡಿದ ಗುರುತರವಾದ ಅರೋಪಗಳಲ್ಲಿ ಒಂದೆಂದರೆ ಸುಮಾರು 20-30 ವರ್ಷಗಳ ಹಿಂದೆ ಶಾಸಕಿ ತನ್ನ ಕಚೇರಿಗೆ ಬಂದು 50,000 ರೂಪಾಯಿ ಕೈಸಾಲ ತೆಗೆದುಕೊಂಡು ಹೋಗಿ ವಾಪಸ್ಸು ಕೊಡದಿರುವುದು. ಅಂದು ಕೇವಲ 50,000 ರೂಪಾಯಿ ತನ್ನಿಂದ ತೆಗೆದುಕೊಂಡ ಹೋದ ಹೆಬ್ಬಾಳ್ಕರ್ ಇಂದು 500 ಕೋಟಿ ರೂ. ಮಾಲೀಕರಾಗಿದ್ದು ಹೇಗೆ ಅಂತ ಪಾಟೀಲ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2023 10:40 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More