AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ

‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ

ರಾಮು, ಆನೇಕಲ್​
| Edited By: |

Updated on: Aug 18, 2026 | 8:30 PM

Share

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಾಗಲಕ್ಷ್ಮೀ ಚೌಧರಿ
  • ಮಹಿಳಾ ಕೈದಿಗಳ ಸಮಸ್ಯೆ ಆಲಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
  • ಪವಿತ್ರಾಗೌಡ ಮತ್ತು ಎಲ್ಲರ ಜೊತೆಗೂ ಮಾತನಾಡಿದ್ದೇನೆ ಎಂದ ನಾಗಲಕ್ಷ್ಮೀ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಹಿಳಾ ಕೈದಿಗಳ ಸಮಸ್ಯೆ ಆಲಿಸಿದರು. ಸೊಳ್ಳೆ ಕಾಟ, ಮಾನಸಿಕ ತೊಳಲಾಟ, ಸಿಬ್ಬಂದಿ ವರ್ಗದ ಕಷ್ಟಗಳನ್ನು ಕಂಡರು. ಪವಿತ್ರಾಗೌಡ ಸೇರಿದಂತೆ ಎಲ್ಲಾ ಕೈದಿಗಳನ್ನೂ ತಮ್ಮ ಮಗಳಂತೆ ನೋಡುವೆ, ಅವರೆಲ್ಲರೂ ಮಾನಸಿಕವಾಗಿ ಕುಗ್ಗಿದ್ದಾರೆ ಎಂದರು.

ಆನೇಕಲ್​​, ಆಗಸ್ಟ್​​ 18: ‘ಜೈಲಿನಲ್ಲಿ ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಅವರ ಸ್ಥಿತಿ ನೋವಿನಿಂದ ಕೂಡಿದೆ. ತಾಯಿಯಾಗಿ ನಮಗೆ ಪವಿತ್ರಾಗೌಡ ಅಥವಾ ಇತರ ಯಾವುದೇ ಹೆಣ್ಣುಮಗಳು ಇರಲಿ ಎಲ್ಲರೂ ಒಂದೇ, ಆಕೆಯೂ ನನಗೆ ಮಗಳ ಸಮಾನ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಹಿಳಾ ಕೈದಿಗಳ ಯೋಗಕ್ಷೇಮ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ‘ಪವಿತ್ರಾಗೌಡ ಮತ್ತು ಎಲ್ಲರ ಜೊತೆಗೆ ಮಾತನಾಡಿದ್ದೇನೆ. ಈಗಾಗಲೇ ಒಂದು ತಪ್ಪನ್ನು ಮಾಡಿ ಜೈಲಿಗೆ ಹೋಗಿರುತ್ತಾರೆ. ಮತ್ತೆ ನಾವು ಅವರ ಬಗ್ಗೆ ಹೆಚ್ಚಾಗಿ ಮಾತನಾಡಿದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us