ಸಹೋದ್ಯೋಗಿಯನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದ ಅರೋಪಿ ಪ್ರವೀಣ್ ಚೌಗುಲೆ ಮನೆಯಲ್ಲಿದ್ದವರನ್ನೆಲ್ಲ ಕೊಂದ: ಡಾ ಅರುಣ್ ಕೆ, ಎಸ್ ಪಿ-ಉಡುಪಿ

ಆರೋಪಿ ಕೊಲ್ಲುವ ನಿರ್ಧಾರ ಮಾಡಿ ಆಯುಧದೊಂದಿಗೆ ಆಕೆಯ ಮನೆಗೆ ಬಂದಿದ್ದಾನೆ. ಮೊದಲಿಗೆ ತನ್ನ ಸಹೋದ್ಯೋಗಿಯನ್ನು ಇರಿದು ಕೊಂದ ಅವನು ಆಕೆಯ ಚೀತ್ಕಾರ ಕೇಳಿ ತಾಯಿ ಹೊರಬಂದಾಗ ಅವರನ್ನು ಅದೇ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಮತ್ತೊಂದು ಕೋಣೆಯಲ್ಲಿದ್ದ ಯುವತಿಯ ಅಕ್ಕ ಆಕ್ರಂದನ ಕೇಳಿ ಆಚೆ ಬಂದಾಗ ಮೂರನೇ ಬಲಿ ಪಡೆದಿದ್ದಾನೆ.

ಸಹೋದ್ಯೋಗಿಯನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದ ಅರೋಪಿ ಪ್ರವೀಣ್ ಚೌಗುಲೆ ಮನೆಯಲ್ಲಿದ್ದವರನ್ನೆಲ್ಲ ಕೊಂದ: ಡಾ ಅರುಣ್ ಕೆ, ಎಸ್ ಪಿ-ಉಡುಪಿ
|

Updated on: Nov 23, 2023 | 12:19 PM

ಉಡುಪಿ: ಎರಡು ವಾರಗಳ ಹಿಂದೆ ನಗರದ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರವೀಣ್ ಚೌಗುಲೆಯನ್ನು (Parveen Chougule) ಇಂದು ನಗರದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ (Dr Arun K SP ) ಸುದ್ದಿಗೋಷ್ಟಿಯೊಂದನ್ನು ನಡೆಸಿ ಪೊಲೀಸ್ ವಿಚಾರಣೆಯಲ್ಲಿ (police interrogation) ಅರೋಪಿಯು ಹತ್ಯೆಗೈದ ಉದ್ದೇಶ ಬಾಯ್ಬಿಟ್ಟಿದನ್ನು ವಿವರಿಸಿದರು. ಆರೋಪಿ ಮತ್ತು ಹತ್ಯೆಯಾದವರ ಪೈಕಿ ಒಬ್ಬ ಯುವತಿ ಸಹೋದ್ಯೋಗಿಗಳಾಗಿದ್ದ ಕಾರಣ ಅವರ ನಡುವೆ ಸ್ನೇಹ ಬೆಳೆದಿತ್ತು. ಪ್ರವೀಣ್ ಒಂದಷ್ಟು ಸಹಾಯವನ್ನು ಯುವತಿಗೆ ಮಾಡಿದ್ದನಂತೆ. ಆದರೆ, ಸುಮಾರು ಒಂದು ತಿಂಗಳು ಹಿಂದೆ ಯುವತಿ ಪ್ರವೀಣ್ ನನ್ನು ನಿರ್ಲಕ್ಷಿಸಲಾರಂಭಿಸಿದ್ದರಿಂದ ಆಕೆಯ ಬಗ್ಗೆ ಪೊಸ್ಸೆಸ್ಸಿವ್ ಆಗಿದ್ದ ಆರೋಪಿ ಕೊಲ್ಲುವ ನಿರ್ಧಾರ ಮಾಡಿ ಆಯುಧದೊಂದಿಗೆ ಆಕೆಯ ಮನೆಗೆ ಬಂದಿದ್ದಾನೆ.

ಮೊದಲಿಗೆ ತನ್ನ ಸಹೋದ್ಯೋಗಿಯನ್ನು ಇರಿದು ಕೊಂದ ಅವನು ಆಕೆಯ ಚೀತ್ಕಾರ ಕೇಳಿ ತಾಯಿ ಹೊರಬಂದಾಗ ಅವರನ್ನು ಅದೇ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಮತ್ತೊಂದು ಕೋಣೆಯಲ್ಲಿದ್ದ ಯುವತಿಯ ಅಕ್ಕ ಆಕ್ರಂದನ ಕೇಳಿ ಆಚೆ ಬಂದಾಗ ಮೂರನೇ ಬಲಿ ಪಡೆದಿದ್ದಾನೆ. ಇವೆರೆಲ್ಲರ ಚೀತ್ಕಾರ, ಕೂಗು ಕೇಳಿ ಹೊರಗಡೆ ಆಡುತ್ತಿದ್ದ ಯುವತಿಯ 12 ವರ್ಷದ ತಮ್ಮ ಮನೆಯೊಳಗೆ ಓಡಿಬಂದಾಗ ಅರೋಪಿಯು ಬಾಲಕನನ್ನೂ ಕೊಂದಿದ್ದಾನೆ ಎಂದು ಎಸ್ ಪಿ ಡಾ ಅರುಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ