ಬೆಂಗಳೂರು: ಕೋಪದ ಭರದಲ್ಲಿ ಸಂತೋಷ ದಾಮಿ ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದೇಬಿಟ್ಟನೇ?

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 30, 2022 | 3:14 PM

ಇಂದು ಬೆಳಗ್ಗೆ ಅವರಿಬ್ಬರ ನಡುವೆ ಜಗಳ ನಡೆದಿದ್ದು ಕೋಪದ ಭರದಲ್ಲಿ ಸಂತೋಷ್, ಪ್ರೇಯಸಿಯನ್ನು ಕೊಂದನೆಂಬ ಆರೋಪ ಕೇಳಿಬಂದಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಮತ್ತು ಲಿವ್-ಇನ್ ರಿಲೇಷನ್ ಶಿಪ್ ನಲ್ಲಿರುವ ಜೋಡಿಗಳ ನಡೆವ ಜಗಳಗಳು ಕೊಲೆಯಲ್ಲಿ ಪರ್ಯಾವಸನಗೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಅಂಥದೊಂದು ಘಟನೆ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ನಡೆದಿದೆ. ತನ್ನೊಂದಿಗೆ ಲಿವ್-ಇನ್ ರಿಲೇಷನ್ ಶಿಪ್ ನಲ್ಲಿದ್ದ (live-in relationship) ನೇಪಾಳಿ ಮೂಲದ ಕೃಷ್ಣಕುಮಾರಿ (Krishna Kumari) ಹೆಸರಿನ ಸುಂದರ ತರುಣಿಯನ್ನು ಸಂತೋಷ್ ದಾಮಿ (Santosh Dami) ಹೆಸರಿನ ಯುವಕ ಕೊಂದಿರವನೆಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ ಅವರಿಬ್ಬರ ನಡುವೆ ಜಗಳ ನಡೆದಿದ್ದು ಕೋಪದ ಭರದಲ್ಲಿ ಸಂತೋಷ್, ಪ್ರೇಯಸಿಯನ್ನು ಕೊಂದನೆಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More