ಮೈಸೂರು: ಸಿದ್ದರಾಮಯ್ಯ ಜೊತೆ ಕಾಣಿಸಿಕೊಳ್ಳುವ ಧಾವಂತದಲ್ಲಿ ವ್ಯಕ್ತಿಯೊಬ್ಬ ಮಹಿಳಾ ವೈದ್ಯಾಧಿಕಾರಿಯನ್ನು ಹಿಂದೆ ತಳ್ಳಿ ಗೂಳಿಯಂತೆ ಮುನ್ನುಗ್ಗಿದ!

ಸಿದ್ದರಾಮಯ್ಯ ಟೇಪ್ ಕಟ್ ಮಾಡಲು ಆಣಿಯಾಗುತ್ತಿರುವಾಗ ಒಬ್ಬ ವ್ಯಕ್ತಿ (ಯಾರೂಂತ ಗೊತ್ತಿಲ್ಲ) ಗುಂಪಿನಿಂದ ತೂರಿಕೊಂಡು ಮುಂದೆ ಬಂದು ಸಿಎಂ ಎಡಕ್ಕಿರುವ ಮಹಿಳಾ ವೈದ್ಯಾಧಿಕಾರಿಗೆ ಹಿಂದೆ ಸರಿಯುವಂತೆ ಹೇಳುತ್ತಾನೆ. ಆ ಮೇಡಂ ಏನೋ ಹೇಳುತ್ತಾರೆ. ವ್ಯಕ್ತಿಗೆ ಸಿದ್ದರಾಮಯ್ಯ ಜೊತೆ ಕಾಣಿಸಿಕೊಳ್ಳುವ ತವಕ, ಆತುರ. ಮಹಿಳಾ ವೈದ್ಯೆಯನ್ನು ಮೊಣಕೈಯಿಂದ ಅಕ್ಷರಶಃ ಹಿಂದೆ ತಳ್ಳಿ ಗೂಳಿಯಂತೆ ಮುನ್ನುಗ್ಗುತ್ತಾನೆ!

ಮೈಸೂರು: ಸಿದ್ದರಾಮಯ್ಯ ಜೊತೆ ಕಾಣಿಸಿಕೊಳ್ಳುವ ಧಾವಂತದಲ್ಲಿ ವ್ಯಕ್ತಿಯೊಬ್ಬ ಮಹಿಳಾ ವೈದ್ಯಾಧಿಕಾರಿಯನ್ನು ಹಿಂದೆ ತಳ್ಳಿ ಗೂಳಿಯಂತೆ ಮುನ್ನುಗ್ಗಿದ!
|

Updated on: Aug 29, 2023 | 7:31 PM

ಮೈಸೂರು: ನಗರದ ಕೆಆರ್ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುಟ್ಟ ಗಾಯಗಳ ಆಸ್ಪತ್ರೆಗಳ ಕಟ್ಟಡವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೇಪ್ ಕತ್ತರಿಸಿ ಲೋಕಾರ್ಪಣೆ ಮಾಡಿದರು. ಟೇಪ್ ಕತ್ತರಿಸುವಾಗ ನಡೆಯವ ಘಟನೆಯನ್ನು ಗಮನಿಸಿ. ಮೊದಲೇ ಅಲ್ಲಿಗೆ ಆಗಮಿಸಿದ್ದ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಮುಖ್ಯಮಂತ್ರಿಗಾಗಿ ಕಾಯುತ್ತಾ ನಿಂತಿರುತ್ತಾರೆ. ಸ್ವಲ್ಪ ಹೊತ್ತಿನ ನಂತರ ಸಿದ್ದರಾಮಯ್ಯ (Siddaramaiah) ಅಲ್ಲಿಗೆ ಬರುತ್ತಾರೆ. ಅವರ ಹಿಂದೆ ಇಬ್ಬರು ಮಹಿಳಾ ವೈದ್ಯೆಯರು (lady medical officers) ಕೂಡ ಆಗಮಿಸುತ್ತಾರೆ. ಅವರಲ್ಲಿ ಒಬ್ಬರು ಮುಖ್ಯಮಂತ್ರಿಯವರ ಬಲಭಾಗದಲ್ಲಿ ನಿಂತರೆ ಮತ್ತೊಬ್ಬರು ಎಡಭಾಗದಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯ ಟೇಪ್ ಕಟ್ ಮಾಡಲು ಆಣಿಯಾಗುತ್ತಿರುವಾಗ ಒಬ್ಬ ವ್ಯಕ್ತಿ (ಯಾರೂಂತ ಗೊತ್ತಿಲ್ಲ) ಗುಂಪಿನಿಂದ ತೂರಿಕೊಂಡು ಮುಂದೆ ಬಂದು ಸಿಎಂ ಎಡಕ್ಕಿರುವ ಮಹಿಳಾ ವೈದ್ಯಾಧಿಕಾರಿಗೆ ಹಿಂದೆ ಸರಿಯುವಂತೆ ಹೇಳುತ್ತಾನೆ. ಆ ಮೇಡಂ ಏನೋ ಹೇಳುತ್ತಾರೆ. ವ್ಯಕ್ತಿಗೆ ಸಿದ್ದರಾಮಯ್ಯ ಜೊತೆ ಕಾಣಿಸಿಕೊಳ್ಳುವ ತವಕ, ಆತುರ. ಮಹಿಳಾ ವೈದ್ಯೆಯನ್ನು ಮೊಣಕೈಯಿಂದ ಅಕ್ಷರಶಃ ಹಿಂದೆ ತಳ್ಳಿ ಗೂಳಿಯಂತೆ ಮುನ್ನುಗ್ಗುತ್ತಾನೆ!

ಪ್ರಾಯಶಃ ಅವನ ಒರಟುತನ ಮುಖ್ಯಮಂತ್ರಿಯವರ ಗಮನಕ್ಕೂ ಬರುತ್ತದೆ. ಅವರು ಓರೆಗಣ್ಣಿನಿಂದ ಒಮ್ಮೆ ಅವನೆಡೆ ನೋಡುತ್ತಾರೆ. ಆದರೆ ವ್ಯಕ್ತಿ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿರ್ಭೀತಿಯಿಂದ, ಬಿಂದಾಸ್ ಆಗಿ ಟೇಪ್ ಕೈಯಲ್ಲಿ ಹಿಡಿದು ಕೆಮೆರಾಗೆ ಪೋಸ್ ಕೊಡುತ್ತಾನೆ. ಮುಖ್ಯಮಂತ್ರಿಯವರು ಇಂಥವರನ್ನು ದೂರ ಇಡೋದೇ ಒಳ್ಳೇದು. ಹಿಂದೊಮ್ಮೆ ಅವಕೃಪೆಗೊಳಗಾಗಿದ್ದ ಮರಿಸ್ವಾಮಿ ಪುನಃ ಸಿದ್ದರಾಮಯ್ಯ ಸುತ್ತಮುತ್ತ ತಿರುಗಾಡುತ್ತಿದ್ದಾರೆ. ಇಲ್ಲೂ ಅವರನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us