Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಕಾರಾಂ ಸಂಸದರಾಗಿರುವುದರಿಂದ ಅನ್ನಪೂರ್ಣ ಶಾಸಕಿಯಾದರೆ ಸಂಡೂರು ಅಭಿವೃದ್ಧಿಯಾಗುತ್ತದೆ: ಸಿದ್ದರಾಮಯ್ಯ

ತುಕಾರಾಂ ಸಂಸದರಾಗಿರುವುದರಿಂದ ಅನ್ನಪೂರ್ಣ ಶಾಸಕಿಯಾದರೆ ಸಂಡೂರು ಅಭಿವೃದ್ಧಿಯಾಗುತ್ತದೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2024 | 10:27 AM

ಅನ್ನಪೂರ್ಣ ಅವರ ಪತಿ ಈ ತುಕಾರಾಂ ಸಂಸದರು, ಅನ್ನಪೂರ್ಣ ಶಾಸಕರಾದರೆ ಇಬ್ಬರೂ ಸೇರಿ ಸಂಡೂರನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಾರೆಂಬ ಭರವಸೆ ತನಗಿದೆ, ಅನ್ನಪೂರ್ಣ ಅವರಿಗೆ ವೋಟು ನೀಡಿ ಗೆಲ್ಲಿಸಿದರೆ ತನ್ನನ್ನು ಗೆಲ್ಲಸಿದಂತೆ, ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಳ್ಳಾರಿ: ಮುಡಾ ಹಗರಣ ಹೊರತಾಗಿಯೂ ಬಳ್ಳಾರಿ ಜಿಲ್ಲೆಯಲ್ಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಕಡಿಮೆ ಆದಂತಿಲ್ಲ. ಸಂಡೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಭಾಷಣಕ್ಕೆ ನಿಂತಾಗ ಜನರ ಕೇಕೆ, ಶಿಳ್ಳೆ ಮತ್ತು ಚಪ್ಪಾಳೆ ಮುಗಿಲು ಮುಟ್ಟಿತ್ತು. ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರೆ ರಾಜ್ಯದಲ್ಲಿ ಏನೂ ಬದಲಾವಣೆ ಆಗಲ್ಲ, ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ಶಾಸಕರ ಸಂಖ್ಯೆ 136ರಿಂದ 139 ಆಗುತ್ತದೆ, ಮತ್ತು ಸರ್ಕಾರಕ್ಕೆ ಮತ್ತಷ್ಟು ಬಲ ಸಿಕ್ಕು ಜನಸೇವೆಯನ್ನು ಇನ್ನಷ್ಟು ಹೆಚ್ಚಿಸಲು ನೆರವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವೇಗೌಡರು ಹೇಳೋದೆಲ್ಲವೂ ವೇದವಾಕ್ಯನಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ರು ಅಷ್ಟೇ: ಸಿಎಂ ಸಿದ್ದರಾಮಯ್ಯ