AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayanagar: ಹೊಸಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ರೂ. 1 ಕೋಟಿ ದೇಣಿಗೆ ನೀಡಲು ಮುಂದಾದ ಅಭಿಮಾನಿ

Vijayanagar: ಹೊಸಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ರೂ. 1 ಕೋಟಿ ದೇಣಿಗೆ ನೀಡಲು ಮುಂದಾದ ಅಭಿಮಾನಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 08, 2023 | 11:53 AM

Share

ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ತನಗಿರುವ 6 ಎಕರೆ ಜಮೀನನಲ್ಲಿ ಎರಡು ಎಕರೆ ಮಾರಿ ರೂ. 1 ಕೋಟಿಯನ್ನು ನೀಡುವುದಾಗಿ ಅವರು ಹೇಳಿದರು.

ವಿಜಯನಗರ: ಮೊನ್ನೆಯಷ್ಟೇ ಯಾದಗಿರಿಯ ಬಿಜೆಪಿ ಮುಖಂಡರೊಬ್ಬರು ಸಿದ್ದರಾಮಯ್ಯನವರು (Siddaramaiah) ತಮ್ಮ ಕ್ಷೇತ್ರಕ್ಕೆ ಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ತಮ್ಮ ವತಿಯಿಂದ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದರು. ಈಗ ಅಂಥದ್ದೇ ಆಹ್ವಾನವನ್ನು ವಿಜಯನಗರ (Vijayanagar) ಜಿಲ್ಲೆ ಹೊಸಪೇಟೆ ನಗರದ ನಿವಾಸಿಯೊಬ್ಬರು ವಿರೋಧ ಪಕ್ಷದ ನಾಯಕನಿಗೆ ನೀಡುತ್ತಿದ್ದಾರೆ. ಹೊಸಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು (development works) ನಡೆದಿಲ್ಲ. ಸಿದ್ದರಾಮಯ್ಯನವರು ಇಲ್ಲಿಂದ ಸ್ಪರ್ಧಿಸಿ ಗೆದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಅವರು ಸ್ಪರ್ಧಿಸುವುದಾದರೆ ತನಗಿರುವ 6 ಎಕರೆ ಜಮೀನನಲ್ಲಿ ಎರಡು ಎಕರೆ ಮಾರಿ ರೂ. 1 ಕೋಟಿಯನ್ನು ನೀಡುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 08, 2023 11:45 AM