ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ‘ಪದವಿ ಪೂರ್ವ’ (Padavi Poorva Movie) ಸಿನಿಮಾ ಬಗ್ಗೆ ವಿಶೇಷವಾದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಸಂಗೀತ ಸಂಯೋಜನೆ ಮಾಡಿದ ಎಲ್ಲ ಹಾಡುಗಳಿಗೆ ಯೋಗರಾಜ್ ಭಟ್ (Yogaraj Bhat) ಸಾಹಿತ್ಯ ಬರೆದಿದ್ದಾರೆ. ಪೃಥ್ವಿ ಶ್ಯಾಮನೂರು ಹೀರೋ ಆಗಿ ನಟಿಸಿರುವ ‘ಪದವಿ ಪೂರ್ವ’ ಚಿತ್ರಕ್ಕೆ ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಸೂಪರ್ ಹಿಟ್ ಆಗುತ್ತಿರುವುದಕ್ಕೆ ಅರ್ಜುನ್ ಜನ್ಯ (Arjun Janya) ಅವರು ಸಂಸತ ವ್ಯಕ್ತಪಡಿಸಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಎಂದಿಗೂ ಇದು ಸ್ಪೆಷಲ್ ಆಲ್ಬಂ ಆಗಿರಲಿದೆ’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.