My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್!

Edited By:

Updated on: Jun 30, 2023 | 5:59 PM

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

Inspirational Story: ಇದು ಮೊಹಮ್ಮದ್ ಇಕ್ಬಾಲ್ ಲೋನ್ ಅವರ ಸ್ಪೂರ್ತಿದಾಯಕ ಕಥೆ – ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.. ಇಲ್ಲವಾದರೆ ಮುಂದಿನ ಪೀಳಿಗೆಗೆ ಇಂದಿನ ಪೀಳಿಗೆಯ ಜನ ಪ್ರಶ್ನಾರ್ಹವಾಗುತ್ತಾರೆ.. ಹಾಗಾಗಿಯೇ ಕೆಲವರು ಪರಿಸರ ರಕ್ಷಣೆಗೆ ಹರಸಾಹಸ ಪಡುತ್ತಾ ಎಲ್ಲರಿಗೂ ಆದರ್ಶವಾಗುತ್ತಿದ್ದಾರೆ. ಅವರು ಪರಿಸರಕ್ಕಾಗಿ ಅಸಂಖ್ಯಾತ ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಈ ಮಹತ್ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಸಹ ಅಂತಹವರನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ 50ನೇ ಪರಿಸರ ದಿನದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗ್ರೀನ್ ವಾರಿಯರ್ಸ್ ಎನಿಸಿಕೊಂಡವರ (Green Warrior Mohammad Iqbal Lone) ಜೀವನ ಕಥೆಗಳನ್ನು ಮತ್ತು ಅವರ ಪ್ರಯತ್ನಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಈ ಆಂದೋಲನದಲ್ಲಿ ಟಿವಿ9 ಸಹ (TV9 Network) ಭಾಗವಹಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 30, 2023 03:28 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More