Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಭಾಸ್ಕರ ಹೆಗಡೆ

ಡಾ. ಭಾಸ್ಕರ ಹೆಗಡೆ

Editor, TV9 Kannada Digital - TV9 Kannada

bhaskar.hegde@tv9.com

ಟಿವಿ9 ಡಿಜಿಟಲ್​ ಸಂಪಾದಕ. 28 ವರ್ಷಗಳಿಂದ ಇಂಗ್ಲಿಷ್ ಮುದ್ರಣ ಮಾಧ್ಯಮ​ ಮತ್ತು ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಸುದ್ದಿ, ದೀರ್ಘ ಲೇಖನ, ನುಡಿಚಿತ್ರ, ವಿಶ್ಲೇಷಣೆ, ಅಂಕಣ ಸ್ಕೂಪ್​ ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಎರಡು ಕಥಾ ಸಂಕಲನಗಳ ಪ್ರಕಟಣೆ. ಸಾರ್ವಜನಿಕ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿ. ಹಿಂದೂಸ್ತಾನಿ ಸಂಗೀತ, ಕ್ರಿಕೆಟ್​, ತತ್ವಶಾಸ್ತ್ರ ಮತ್ತು ಕಾನೂನಿನ ವಿಷಯದ ತೀವ್ರ ಆಸಕ್ತಿ.

Read More
Follow On:
Karnataka Honey trap case: ಕಾಮಖೆಡ್ಡಾ ಕೇಸಿನ ಸೂತ್ರಧಾರ ತಪ್ಪಿಸಿಕೊಳ್ಳುವುದು ಗ್ಯಾರೆಂಟಿ

Karnataka Honey trap case: ಕಾಮಖೆಡ್ಡಾ ಕೇಸಿನ ಸೂತ್ರಧಾರ ತಪ್ಪಿಸಿಕೊಳ್ಳುವುದು ಗ್ಯಾರೆಂಟಿ

ದೇಶದ ವಿರೋಧಿಗಳನ್ನು ಸೋಲಿಸಲು ಎರಡನೇ ಮಹಾಯುದ್ಧದಲ್ಲಿ ಬಳಸಿದ Honeytrap Method ಅಥವಾ ಕಾಮಖೆಡ್ಡಾ ವಿಧಾನವನ್ನು ಕರ್ನಾಟಕದಲ್ಲಿ ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಮಹಾಯುದ್ಧದಲ್ಲಿ ಕಾಮಖೆಡ್ಡಾಕ್ಕೆ ಯಾರು ಇಳಿಸಿದ್ದರೆಂಬುದು ಗೊತ್ತಾಗುತ್ತಿತ್ತು, ಆದರೆ ನಮ್ಮಲ್ಲ ಆ ಮಾಹಿತಿ ಹೊರಗೆ ಬರುವುದಿಲ್ಲ!

ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದ ಬಿಜೆಪಿಯ ದೆಹಲಿ ಗೆಲುವು

ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದ ಬಿಜೆಪಿಯ ದೆಹಲಿ ಗೆಲುವು

2024 ರ ಲೋಕಸಭೆ ಚುನಾವಣೆ ನಂತರ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸಂಪೂರ್ಣ ಬಹುಮತದ ಗೆಲುವು ಪಡೆದಿರುವ ಬಿಜೆಪಿಯ ಗೆಲುವಿನ ಅಶ್ವಮೇಧ ಕುದುರೆಯನ್ನು ಸದ್ಯಕ್ಕಂತೂ ಯಾರೂ ಕಟ್ಟಿ ಹಾಕುವ ಲಕ್ಷಣ ಇಲ್ಲ. ಈ ಗೆಲುವು ಮುಂದಿನ ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದಬಹುದೇ, ಈ ಬಗ್ಗೆ ಇಲ್ಲಿದೆ ನೋಡಿ.

ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ

ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ

ಮೈಕ್ರೋ ಫೈನಾನ್ಸ್‌ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಕೆಲವರು ಆತ್ಮಹತ್ಯೆ ಹಾದಿ ಹಿಡಿದರೆಮ ಇನ್ನೂ ಕೆಲವರು ಊರನ್ನೇ ಬಿಟ್ಟು ಓಡಾಡುತ್ತಿದ್ದಾರೆ. ನಮ್ಮ ಸಮಾಜದಲ್ಲಿನ ಕೆಲವು ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಮೀಟರ್ ಬಡ್ಡಿ ಸಮಸ್ಯೆಯಂತ ಕ್ಲಿಷ್ಟ ಸಮಸ್ಯೆಗೆ ಪಕ್ಷಾತೀತವಾಗಿ ಕೆಲಸ ಮಾಡದ ನಮ್ಮ ರಾಜಕೀಯ ವ್ಯವಸ್ಥೆಯಿಂದ ಪರಿಹಾರ ನಿರೀಕ್ಷಿಸುವುದು ತಪ್ಪಾದೀತು.

ವಿಶ್ವ ಹವ್ಯಕ ಸಮ್ಮೇಳನ—ನಿಲ್ಲದ ವಿವಾದ, ನಿಲುಕದ ವಾಸ್ತವ

ವಿಶ್ವ ಹವ್ಯಕ ಸಮ್ಮೇಳನ—ನಿಲ್ಲದ ವಿವಾದ, ನಿಲುಕದ ವಾಸ್ತವ

ಕರ್ನಾಟಕದಲ್ಲಿ ಅಥವಾ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಜಾತಿ ಸಮ್ಮೇಳನ ನಡೆಯುವುದು ಹೊಸದಲ್ಲ. ರಾಜಕೀಯ ಪಕ್ಷಗಳು, ಸಮಾಜದ ನಾಯಕರುಗಳು ಮುಂದೆ ನಿಂತು ಈ ರೀತಿಯ ಸಭೆ ನಡೆಸಿ, ಕೊನೆಗೆ ತಮ್ಮ ಬೇಡಿಕೆ ಪಟ್ಟಿಯನ್ನು ಮುಂದಿಡುವುದನ್ನು ನೋಡಿದ್ದೇವೆ. ಆದರೆ, ಇತ್ತೀಚೆಗೆ ನಡೆದ ಹವ್ಯಕ ಸಮ್ಮೇಳನದ ಬಗ್ಗೆ ವ್ಯಕ್ತವಾದ ತೀವ್ರ ರೇಜಿಗೆಗೆ ಕಾರಣ ಹುಡುಕಿ, ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸುವುದು ಅವಶ್ಯಕವಾಗಿವೆ.

ಕೆಪಿಎಸ್​ಸಿ ಕರ್ಮಕಾಂಡ: ಅಭ್ಯರ್ಥಿಗಳ ಅಂಗಿ ಹರಿಯುವ ಪರೀಕ್ಷಾ ಪದ್ಧತಿ ಬೇಡ, ಭ್ರಷ್ಟಾಚಾರವಿಲ್ಲದ ವ್ಯವಸ್ಥೆ ತನ್ನಿ

ಕೆಪಿಎಸ್​ಸಿ ಕರ್ಮಕಾಂಡ: ಅಭ್ಯರ್ಥಿಗಳ ಅಂಗಿ ಹರಿಯುವ ಪರೀಕ್ಷಾ ಪದ್ಧತಿ ಬೇಡ, ಭ್ರಷ್ಟಾಚಾರವಿಲ್ಲದ ವ್ಯವಸ್ಥೆ ತನ್ನಿ

ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ರಚಿತವಾದ ಕರ್ನಾಟಕ ಲೋಕ ಸೇವಾ ಆಯೋಗ ಭ್ರಷ್ಟಾಚಾರದ ಗೂಡಾಗಿದೆ. ಇದನ್ನು ಸರಿ ಮಾಡಬೇಕಾದ ಸರಕಾರ ಕಣ್ಣು ಮುಚ್ಚಿ ಕುಳಿತರೆ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಹೇಗೆ? ಸರಕಾರ ಈ ಕುರಿತು ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರೆ, ಕೆಪಿಎಸ್​ಸಿ ಬಗ್ಗೆ ಮತ್ತು ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಸರಕಾರ ಪದೇ ಪದೇ ನೀಡುವ ಆಶ್ವಾಸನೆಯಲ್ಲಿ ಜನರಿಗೆ ವಿಶ್ವಾಸ ಉಳಿಯುತ್ತದೆ.

ಮುಡಾ, ವಾಲ್ಮೀಕಿ ಹಗರಣಕ್ಕೆ ಬೈ ಎಲೆಕ್ಷನ್ ಫಲಿತಾಂಶ ತೀರ್ಪಲ್ಲ: ಭ್ರಷ್ಠಾಚಾರದ ಆರೋಪ ಕೋರ್ಟ್​ನಲ್ಲೇ ನಿರ್ಧಾರವಾಗಲಿ

ಮುಡಾ, ವಾಲ್ಮೀಕಿ ಹಗರಣಕ್ಕೆ ಬೈ ಎಲೆಕ್ಷನ್ ಫಲಿತಾಂಶ ತೀರ್ಪಲ್ಲ: ಭ್ರಷ್ಠಾಚಾರದ ಆರೋಪ ಕೋರ್ಟ್​ನಲ್ಲೇ ನಿರ್ಧಾರವಾಗಲಿ

ಚುನಾವಣೆಯಲ್ಲಿ ಗೆದ್ದು, ತಮ್ಮ ಮೇಲೆ ಬಂದ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ತಾನು ಅಗ್ನಿಪರೀಕ್ಷೆ ಗೆದ್ದೆ ಎಂದು ನಾಯಕರು ಹೇಳುವುದು ವಾಡಿಕೆ. ಜನ ಇದನ್ನು ಒಪ್ಪಬಾರದು. ಯಾವುದೇ ನಾಯಕರುಗಳ ಮೇಲಿನ ಭೃಷ್ಠಾಚಾರದ ಆರೋಪ ನ್ಯಾಯಾಲಯದಲ್ಲಿ ಮಾತ್ರ ನಿರ್ಧಾರವಾಗಬೇಕು.

ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ

ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ

ಕರ್ನಾಟಕದಲ್ಲಿ ಬಿಜೆಪಿ ಇಡುತ್ತಿರುವ ತಪ್ಪು ಹೆಜ್ಜೆಗಳು ಒಂದೆರಡಲ್ಲವೆನ್ನಬಹುದು. ಅದರ ಪರಿಣಾಮವೇ ಉಪಚುನಾವಣೆಯಲ್ಲಿ ಕಮಲ ಪಡೆಗೆ ಮೂರೂ ಕ್ಷೇತ್ರಗಳಲ್ಲಿ ಈಗ ಆಗಿರುವ ಸೋಲು. ಹಾಗಾದರೆ ಬಿಜೆಪಿ ಎಡವುತ್ತಿರುವುದು ಎಲ್ಲಿ? ಪಕ್ಷದ ನಾಯಕರ ಲೆಕ್ಕಾಚಾರ ತಲೆಕೆಳಗಾಗಲು ಕಾರಣವೇನು? ಇಲ್ಲಿದೆ ವಿಶ್ಲೇಷಣೆ.

Waqf Property Dispute: ಕರ್ನಾಟಕದಲ್ಲಿ ಕಂದಾಯ ಭೂಮಿ, ದಟ್ಟಾರಣ್ಯ ಕೂಡ ವಕ್ಫ್ ಆಸ್ತಿ, ಹುರುಳಿಲ್ಲದ ಸರಕಾರದ ವಾದ

Waqf Property Dispute: ಕರ್ನಾಟಕದಲ್ಲಿ ಕಂದಾಯ ಭೂಮಿ, ದಟ್ಟಾರಣ್ಯ ಕೂಡ ವಕ್ಫ್ ಆಸ್ತಿ, ಹುರುಳಿಲ್ಲದ ಸರಕಾರದ ವಾದ

ಕರ್ನಾಟಕ ವಕ್ಫ್ ವಿವಾದ: ವಕ್ಫ್ ಆಸ್ತಿ ಕಾಯಿದೆ ತಿದ್ದುಪಡಿ ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ ಮೀಸಲು ಅರಣ್ಯವನ್ನು ಮತ್ತು ಕಂದಾಯ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಹರಿಯಾಣಾ ವಿಧಾನಸಭೆ ಫಲಿತಾಂಶ- ಮುಡಾ ಹಗರಣಕ್ಕೆ ತಿರುವು, ಸಿದ್ದುಗೆ ಸಂಕಷ್ಟ

ಹರಿಯಾಣಾ ವಿಧಾನಸಭೆ ಫಲಿತಾಂಶ- ಮುಡಾ ಹಗರಣಕ್ಕೆ ತಿರುವು, ಸಿದ್ದುಗೆ ಸಂಕಷ್ಟ

ವಿರೋಧಿ ನಾಯಕನಿಗೆ ಹಿನ್ನಡೆ ಆದಾಗಲೇ ಪೆಟ್ಟು ಕೊಡುವ ಪಟ್ಟು ರಾಜಕೀಯದಲ್ಲಿ ಹೊಸದೇನಲ್ಲ. ಹರಿಯಾಣದಲ್ಲಿ ಮತ್ತೆ ಮುಗ್ಗರಿಸಿದ ಕಾಂಗ್ರೆಸ್ ಗೆ ಮತ್ತು ರಾಹುಲ್ ಗಾಂಧಿಗೆ ಮುಖಭಂಗ ಮಾಡಲು, ಮುಡಾ ಹಗರಣದ ಆರೋಪಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಡೆ ಮುರಿ ಕಟ್ಟಲು ಇ ಡಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

‘ನೀಟ್’ ಆಗಿ​ ಸಂವಿಧಾನ ವಿರೋಧಿ ಕ್ರಮ ಕೈಗೊಂಡ ಕಾಂಗ್ರೆಸ್ ಸರ್ಕಾರ!

‘ನೀಟ್’ ಆಗಿ​ ಸಂವಿಧಾನ ವಿರೋಧಿ ಕ್ರಮ ಕೈಗೊಂಡ ಕಾಂಗ್ರೆಸ್ ಸರ್ಕಾರ!

ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಿಂದ ತತ್ತರಿಸಿರುವ ಕಾಂಗ್ರೆಸ್​ ಸರಕಾರ ಜನರಲ್ಲಿ ಹೊಸ ಸಂಕಥನ ಹುಟ್ಟು ಹಾಕಲು ಪ್ರಯತ್ನಿಸಿದೆ. ಆ ಪ್ರಯತ್ನದ ಫಲವೇ ನೀಟ್​ ವಿರೋಧಿ ಗೊತ್ತುವಳಿಯನ್ನು ವಿಧಾನ ಮಂಡಲ ಅಂಗೀಕರಿಸಿದ್ದು. ನೀಟ್​ ವಿರೋಧಿ ಗೊತ್ತುವಳಿ ಅಂಗೀಕರಿಸಿ, ಕಾಂಗ್ರೆಸ್​ ಕೂಡ ಸಂವಿಧಾನ ವಿರೋಧಿ ಎಂದು ಸಾಬೀತು ಪಡಿಸಿದೆ.

ಹುಬ್ಬಳ್ಳಿ ನೇಹಾ ಕೊಲೆ ಕೇಸ್​: ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ

ಹುಬ್ಬಳ್ಳಿ ನೇಹಾ ಕೊಲೆ ಕೇಸ್​: ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ

ಲೈಂಗಿಕ ದೌರ್ಜನ್ಯ ಇರಲಿ ಅಥವಾ ಇತರ ಘೋರ ಅಪರಾಧ ಕೃತ್ಯವೇ ಇರಲಿ, ಕೊಲೆಯೇ ನಡೆದಿರಲಿ. ಹುಡುಗಿಯ ನಡತೆ ಬಗ್ಗೆ ಸಾರ್ವಜನಿಕವಾಗಿ ಒಂದಿಷ್ಟು ಸಾಕ್ಷ್ಯಾಧಾರ ಹರಿಬಿಟ್ಟು ಸಾರ್ವಜನಿಕರ ಸಿಟ್ಟನ್ನು ಮಟ್ಟ ಹಾಕುವ ಪ್ರಯತ್ನ ನಿಲ್ಲಲೇಬೇಕು. ಆದರೆ, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಆಗಿದ್ದೇನು? ಆಡಳಿತ ಯಂತ್ರದಲ್ಲಿರುವವರು ಗಮನಿಸಬೇಕಾದ ಅಂಶವೇನು? ಈ ಕುರಿತು ‘ಟಿವಿ9 ಕನ್ನಡ ಡಿಜಿಟಲ್’ ಸಂಪಾದಕ ಭಾಸ್ಕರ ಹೆಗಡೆ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಗೆಲುವು, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರ ಸೋಲು: ಒಂದು ವಿಶ್ಲೇಷಣೆ

ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಗೆಲುವು, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರ ಸೋಲು: ಒಂದು ವಿಶ್ಲೇಷಣೆ

ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ (Loksabha Elections 2024) ಸ್ಪರ್ಧಿಸುವ ಕಾಂಗ್ರೆಸ್ (Congress)​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಎಐಸಿಸಿ, ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಆದ್ರೆ, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರರ ಸಹೋದರ, ಸಂಬಂಧಿಗಳಿಗೆ ಮಣೆ ಹಾಕಿದೆ. ಇನ್ನು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಒಂದು ವಿಶ್ಲೇಷಣೆ ಇಲ್ಲಿದೆ.