ಟಿವಿ9 ಡಿಜಿಟಲ್ ಸಂಪಾದಕ. 28 ವರ್ಷಗಳಿಂದ ಇಂಗ್ಲಿಷ್ ಮುದ್ರಣ ಮಾಧ್ಯಮ ಮತ್ತು ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಸುದ್ದಿ, ದೀರ್ಘ ಲೇಖನ, ನುಡಿಚಿತ್ರ, ವಿಶ್ಲೇಷಣೆ, ಅಂಕಣ ಸ್ಕೂಪ್ ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಎರಡು ಕಥಾ ಸಂಕಲನಗಳ ಪ್ರಕಟಣೆ. ಸಾರ್ವಜನಿಕ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ. ಹಿಂದೂಸ್ತಾನಿ ಸಂಗೀತ, ಕ್ರಿಕೆಟ್, ತತ್ವಶಾಸ್ತ್ರ ಮತ್ತು ಕಾನೂನಿನ ವಿಷಯದ ತೀವ್ರ ಆಸಕ್ತಿ.
‘ನೀಟ್’ ಆಗಿ ಸಂವಿಧಾನ ವಿರೋಧಿ ಕ್ರಮ ಕೈಗೊಂಡ ಕಾಂಗ್ರೆಸ್ ಸರ್ಕಾರ!
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಿಂದ ತತ್ತರಿಸಿರುವ ಕಾಂಗ್ರೆಸ್ ಸರಕಾರ ಜನರಲ್ಲಿ ಹೊಸ ಸಂಕಥನ ಹುಟ್ಟು ಹಾಕಲು ಪ್ರಯತ್ನಿಸಿದೆ. ಆ ಪ್ರಯತ್ನದ ಫಲವೇ ನೀಟ್ ವಿರೋಧಿ ಗೊತ್ತುವಳಿಯನ್ನು ವಿಧಾನ ಮಂಡಲ ಅಂಗೀಕರಿಸಿದ್ದು. ನೀಟ್ ವಿರೋಧಿ ಗೊತ್ತುವಳಿ ಅಂಗೀಕರಿಸಿ, ಕಾಂಗ್ರೆಸ್ ಕೂಡ ಸಂವಿಧಾನ ವಿರೋಧಿ ಎಂದು ಸಾಬೀತು ಪಡಿಸಿದೆ.
- bhaskar hegde
- Updated on: Jul 26, 2024
- 11:17 am
ಹುಬ್ಬಳ್ಳಿ ನೇಹಾ ಕೊಲೆ ಕೇಸ್: ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ
ಲೈಂಗಿಕ ದೌರ್ಜನ್ಯ ಇರಲಿ ಅಥವಾ ಇತರ ಘೋರ ಅಪರಾಧ ಕೃತ್ಯವೇ ಇರಲಿ, ಕೊಲೆಯೇ ನಡೆದಿರಲಿ. ಹುಡುಗಿಯ ನಡತೆ ಬಗ್ಗೆ ಸಾರ್ವಜನಿಕವಾಗಿ ಒಂದಿಷ್ಟು ಸಾಕ್ಷ್ಯಾಧಾರ ಹರಿಬಿಟ್ಟು ಸಾರ್ವಜನಿಕರ ಸಿಟ್ಟನ್ನು ಮಟ್ಟ ಹಾಕುವ ಪ್ರಯತ್ನ ನಿಲ್ಲಲೇಬೇಕು. ಆದರೆ, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಆಗಿದ್ದೇನು? ಆಡಳಿತ ಯಂತ್ರದಲ್ಲಿರುವವರು ಗಮನಿಸಬೇಕಾದ ಅಂಶವೇನು? ಈ ಕುರಿತು ‘ಟಿವಿ9 ಕನ್ನಡ ಡಿಜಿಟಲ್’ ಸಂಪಾದಕ ಭಾಸ್ಕರ ಹೆಗಡೆ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.
- bhaskar hegde
- Updated on: Apr 21, 2024
- 10:01 pm
ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಗೆಲುವು, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರ ಸೋಲು: ಒಂದು ವಿಶ್ಲೇಷಣೆ
ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ (Loksabha Elections 2024) ಸ್ಪರ್ಧಿಸುವ ಕಾಂಗ್ರೆಸ್ (Congress) ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಎಐಸಿಸಿ, ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಆದ್ರೆ, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರರ ಸಹೋದರ, ಸಂಬಂಧಿಗಳಿಗೆ ಮಣೆ ಹಾಕಿದೆ. ಇನ್ನು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಒಂದು ವಿಶ್ಲೇಷಣೆ ಇಲ್ಲಿದೆ.
- bhaskar hegde
- Updated on: Mar 25, 2024
- 6:53 pm
ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ
ಸ್ವಲ್ಪ ನೆನಪು ಮಾಡಿಕೊಳ್ಳಿ. 2018 ವಿಧಾನಸಭೆ ಚುನಾವಣೆಗೆ 10 ತಿಂಗಳು ಸಮಯ ಇದೆ ಎನ್ನುವಾಗ ನಡೆದ ಆ ಚರ್ಚೆ. ಆಗ ಚರ್ಚೆಗೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿಷಯ ಇರಲಿಲ್ಲ. ಆಡಳಿತರೂಢ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟುವ ಲಕ್ಷಣ ಇತ್ತು. ಆಗ ಮುಖ್ಯಮಂತ್ರಿ ಆಗಿದ್ದ, ಕರ್ನಾಟಕದ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಮ್ಮಿಂದೊಮ್ಮೆಲೆ ಹಿಂದಿ-ವಿರೋಧಿ ಚಳವಳಿಯ ತಿದಿ ಒತ್ತಿದರು. ಒಮ್ಮೆಲೆ ಎಲ್ಲೆಲ್ಲೂ ಚರ್ಚೆ ಮೊಳಗಿತು. ಕನ್ನಡದ ಅಸ್ಮಿತೆ ಉಳಿಸಿ ಎಂಬ ಉದ್ಘೋಷ ಎಲ್ಲೆಲ್ಲೂ ಹರಡಿತು. ಬೆಂಗಳೂರಿನಲ್ಲಿ ಕೆಲವರು ರಸ್ತೆಗೆ ಇಳಿದರು, ಮೆಟ್ರೋ ಸ್ಟೇಶನ್ಗೆ ಮುತ್ತಿಗೆ ಹಾಕಿ, ಹಿಂದಿಯಲ್ಲಿದ್ದ ಬೋರ್ಡ್ಗಳಿಗೆ ಕಪ್ಪು ಮಸಿ ಬಳಿದರು. ನಾವೆಲ್ಲ ಖುಷಿ ಪಟ್ಟೆವು. ಪ್ರಧಾನಿ ನರೇಂದ್ರ ಮೋದಿಯನ್ನು ಸಿದ್ಧರಾಮಯ್ಯ ಹಿಗ್ಗಾಮುಗ್ಗಾ ಬಯ್ದರು. ಆಗ ಎಲ್ಲ ಅಂದು ಕೊಂಡಿದ್ದು-ಮೋದಿ ಎದುರಿಸಲು ಎದೆಗಾರಿಕೆ ಇರುವ ಏಕೈಕ ನಾಯಕ ಸಿದ್ಧರಾಮಯ್ಯ ಎಂದು. ಬಿಜೆಪಿ ಹಿಂದಿ ಪರ, ಕಾಂಗ್ರೆಸ್ ಹಿಂದಿ ಹೇರಿಕೆ ವಿರುದ್ಧ ಎಂದು ರಾಷ್ಟ್ರೀಯ ಟಿವಿ ಚಾನೆಲ್ಗಳಲ್ಲಿ ಕೂಡ ಬಿಂಬಿತವಾಯ್ತು. ಅದು 2019 ರ ಚುನಾವಣೆವರೆಗೆ ಮುಂದುವರಿಯಿತು.
- bhaskar hegde
- Updated on: Feb 6, 2024
- 8:18 pm
ಆತಿಥ್ಯಕ್ಕೆ ಐಎಎಸ್, ವಿಪಕ್ಷ ಶಾಸಕರ ಅಮಾನತು; ಕರ್ನಾಟಕ ಶಾಸಕಾಂಗ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯ್ತೇ ವಿದ್ಯಮಾನ?
ಎರಡು ರಾಷ್ಟ್ರೀಯ ಪಕ್ಷಗಳಿಗೆ ಶಾಸಕಾಂಗದ ಚರ್ಚೆಯ ಅವಶ್ಯಕತೆ ಮರೆತು ಹೋಗಿ, ಅಧಿವೇಶನ ಕೂಡ ಮುಂದಿನ ವರ್ಷದ ಚುನಾವಣೆಯ ಶಸ್ತ್ರಾಭ್ಯಾಸದ ಭಾಗವಾಗಿ ಕಂಡಿದ್ದರಿಂದ ಹಲವಾರು ದಾಖಲೆಗಳು ಮೊದಲ ಅಧಿವೇಶನದಲ್ಲಿ ಆಗಿದ್ದು ನಿಚ್ಚಳ. ಧರಣಿನಿರತ ಶಾಸಕರು ಎದುರಾಳಿ ಪಕ್ಷದ ಹುಳುಕನ್ನು ತೋರಿಸಿ ಜನರ ಬೆಂಬಲ ಗಳಿಸಲು ಏನೆಲ್ಲಾ ಚತುರತೆ ತೋರುತ್ತಿದ್ದಾರೆ ಮತ್ತು ಆಡಳಿತ ಪಕ್ಷ ಕೂಡ ಏನೆಲ್ಲ ಪಟ್ಟು ಹಾಕಬಹುದು ಎಂಬುದರ ಝಲಕ್ ನೋಡಲು ದೊರೆಯಿತು.
- bhaskar hegde
- Updated on: Jul 22, 2023
- 11:01 am
Karnataka Budget 2023: ರಾಜಕೀಯ ಲೇಪದ ಮೂಲಕ ಬಜೆಟ್ ಮೂಲ ತತ್ವವನ್ನೇ ಉಲ್ಲಂಘಿಸಿದರೇ ಸಿದ್ದರಾಮಯ್ಯ?
ಕೋವಿಡ್ ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಇದು ವಿಶೇಷ. ಯಾಕೆಂದರೆ, ಯಾವುದೇ ಆರೋಪ ಸಾಬೀತಾಗುವವರೆಗೆ ಅದನ್ನು ಆರೋಪ ಎಂದು ಮಾತ್ರ ಹೇಳಲಾಗುತ್ತದೆ. ಇದು ಪ್ರಾಯಶಃ ಮುಂಗಡಪತ್ರ ತಯಾರಿಸುವ ತತ್ವವನ್ನೇ ಉಲ್ಲಂಘಿಸಿದಂತೆ ಆಗಿದೆ ಎಂದರೂ ತಪ್ಪಾಗಲಾರದು.
- bhaskar hegde
- Updated on: Jul 7, 2023
- 7:45 pm
Karnataka Election Results: ಬಿಜೆಪಿ ಸೋಲು, ಕಾಂಗ್ರೆಸ್ ಗೆಲುವಿಗೆ ನಾಯಕರು ಹೇಳಿದ್ದಲ್ಲ, ನಿಜವಾದ ಕಾರಣ ಇಲ್ಲಿದೆ
ಒಂದು ರಾಜ್ಯ ಸರಕಾರಕ್ಕೆ ಇರುವ ದೊಡ್ಡ ಸವಾಲು ಅಧಿಕಾರ-ವಿರೋಧಿ ಅಲೆ. ಅದು ಇತ್ತೇ? ಹಾಗಿದ್ದರೆ, ಕಾಂಗ್ರೆಸ್ ನಾಯಕರು ಹೇಳಿದ ಕಾರಣಗಳು ಅಧಿಕಾರ ವಿರೋಧಿ ಅಲೆಯ ವ್ಯಾಖ್ಯೆಯ ಒಳಗೆ ಬರುತ್ತಿಲ್ಲವೇ?
- bhaskar hegde
- Updated on: May 14, 2023
- 9:58 am
Karnataka Assembly Elections 2023: ಅಧಿಕಾರ ವಿರೋಧಿ ಅಲೆ ಹೊಡೆದೋಡಿಸಲು ಮೋದಿ ಮಂತ್ರ ಏನು?
ಕೊವಿಡ್ನಿಂದಾಗಿ, ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗದೇ ಆಡಳಿತ ವಿರೋಧಿ ಅಲೆ ಹುಟ್ಟಿರಬಹುದು ಎಂಬ ಗುಮಾನಿ ಬಿಜೆಪಿ ಪಕ್ಷದ ಹಲವಾರು ನಾಯಕರಿಗೆ ಕಾಡುತ್ತಿದೆ. ಅದೇ ಕಾರಣದಿಂದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ತಮ್ಮ ಭರವಸೆಯನ್ನಿಟ್ಟುಕೊಂಡಿದ್ದಾರೆ.
- bhaskar hegde
- Updated on: Apr 21, 2023
- 5:01 pm
Karnataka Elections 2023: ಪ್ರಧಾನಿ ಮೋದಿ ರೋಡ್ ಶೋ, ಜನರ ಜೊತೆಗಿನ ನೇರ ಸಂಬಂಧದ ಪ್ರಚಾರ
ಕಳೆದ ಮೂರು ತಿಂಗಳಲ್ಲಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ, ಹಲವು ಕಡೆ ರೋಡ್ ಶೋ ನಡೆಸಿದ್ದರು. ಚುನಾವಣಾ ತಯಾರಿ ಮಾಡುತ್ತಿರುವಾಗಲೇ ರೋಡ್ ಶೋ ಮಾಡಿ, ಬಿಜೆಪಿ ಹವಾ ಹುಟ್ಟು ಹಾಕಲು ಅವರು ಪ್ರಯತ್ನಿಸಿದ್ದರು.
- bhaskar hegde
- Updated on: Apr 20, 2023
- 5:02 pm
Karnataka Polls: ಜಾತಿ ಮೀಸಲಾತಿ ನಿರ್ಣಯ; ಬಿಜೆಪಿಗೆ ವರವೋ?
ಕಾಂಗ್ರೆಸ್ ಪ್ರಾಯಶಃ, ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಕಾಣುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಬಿಜೆಪಿ ತಂದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಕೈ ಪಕ್ಷದ ನಾಯಕರು ಹೇಳಿದ್ದಾರೆ. ಇದನ್ನು ವೀರಶೈವ ಲಿಂಗಾಯತರು ಅಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎಂದು ಕಾಣುವುದಿಲ್ಲ. ಯಾಕೆಂದರೆ, ಮುಸ್ಲಿಂ ಪರವಾಗಿ ಕಾಂಗ್ರೆಸ್ ಹೆಚ್ಚು ಹೆಚ್ಚು ಬ್ಯಾಟ್ ಬೀಸಿದರೆ ಹಿಂದೂ ಮತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
- bhaskar hegde
- Updated on: Apr 20, 2023
- 11:40 am
Karnataka Polls: ಕರ್ನಾಟಕದಲ್ಲಿ ಗುಜರಾತ್ ಮಾದರಿ; 72 ಹೊಸ ಮುಖ, ಮೋದಿ – ಶಾ ಲೆಕ್ಕಾಚಾರ ಏನು?
ಈ ಬಾರಿ ಕರ್ನಾಟಕದಲ್ಲಿ ಮೋದಿ ಹಾಗೂ ಅಮಿತ್ ಶಾ ಲೆಕ್ಕಾಚಾರದಂತೆ ನಡೆದು 72 ಹಾಲಿ ಶಾಸಕರನ್ನು ಮನೆಗೆ ಕಳಿಸಿದ ಪ್ರಯೋಗ ಯಶಸ್ವಿಯಾದರೆ ಬಹು ದೊಡ್ಡ ಫಲಿತಾಂಶ ಕಾದಿದೆ-ಪಕ್ಷ ಪುನಃ ಅಧಿಕಾರಕ್ಕೆ ಬರುವುದು. ಅದು ಮೊದಲ ಯಶಸ್ಸು. ಅದಕ್ಕಿಂತ ದೊಡ್ಡ ಯಶಸ್ಸು ಯಾವುದು ಗೊತ್ತೆ? ಮುಂದೆ ಓದಿ.
- bhaskar hegde
- Updated on: Apr 19, 2023
- 11:33 am
Tv9 Web Exclusive: ಹಾಸನಕ್ಕೆ ಭವಾನಿ ರೇವಣ್ಣ ಪಟ್ಟು, ಎಚ್ಡಿಕೆ ರಹಸ್ಯ ಮಾತುಕತೆ; ಜೆಡಿಎಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ
Hassan Politics: ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಭವಾನಿ ರೇವಣ್ಣ (Bhavani Revanna) ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತದೆಯೇ ಎಂಬ ಬಗ್ಗೆ ಮಾತ್ರ ಎಲ್ಲರಿಗೂ ಕುತೂಹಲ ಇದೆ. ಈ ಕಾರಣಕ್ಕೆ ಇಲ್ಲೊಂದು ವರದಿ ನಿಮ್ಮೆದುರು ಇಡಲಾಗುತ್ತಿದೆ.
- bhaskar hegde
- Updated on: Feb 5, 2023
- 9:37 am