ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ಇಂದಿಗೆ (ಜ.29 ಶನಿವಾರ) ಮೂರು ತಿಂಗಳು ಸಂದಿದೆ. ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅದರ ನಂತರ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅಭಿಮಾನಿಗಳಿಗೆ ಸಸಿಗಳನ್ನು ವಿತರಿಸಿದ್ದಾರೆ. ಇಂದು ಸುಮಾರು 500 ಸಸಿಗಳನ್ನು ವಿತರಿಸಲಾಗುತ್ತದೆ. ಈ ಕುರಿತು ಮಾಹಿತಿ ನೀಡಿದ್ದ ರಾಘವೇಂದ್ರ ರಾಜ್ಕುಮಾರ್, ಪುನೀತ್ಗೆ ಕಾಡೆಂದರೆ ಕಾಳಜಿ ಇತ್ತು. ಆದ್ದರಿಂದ ಅಭಿಮಾನಿಗಳೆಲ್ಲರಿಗೂ ಗಿಡ ನೀಡಿ, ಕಾಡು ಬೆಳೆಸೋದಕ್ಕೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಸಸಿ ನೀಡಲು ಮತ್ತೊಂದು ಕಾರಣವನ್ನು ವಿವರಿಸಿದ ಅವರು, ಗಿಡಗಳಲ್ಲಿ ಆತ್ಮ ವಾಸಿಸುತ್ತದೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಆತ್ಮಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ನುಡಿದಿದ್ದಾರೆ. ಇದಲ್ಲದೇ ಇಂದು ಅನ್ನದಾನ ಸೇವೆ ಹಾಗೂ ಸಂಜೆ ದೀಪೋತ್ಸವ ನಡೆಯಲಿದೆ.
ಇದನ್ನೂ ಓದಿ:
Puneeth Rajkumar: ಪುನೀತ್ ಅಗಲಿ 3 ತಿಂಗಳು; 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಣೆ ಮಾಡಲಿರುವ ಕುಟುಂಬಸ್ಥರು
ಕುಡಿದು ರಂಪಾಟ ಮಾಡಿದ ಕಿರುತೆರೆ ಕಲಾವಿದರು; ನಟ ರಕ್ಷಿತ್ ಸೇರಿ 7 ಜನರ ಮೇಲೆ ಎಫ್ಐಆರ್