ಉಪ್ಪಿಯ ಬೆಂಬಲಿಸಿದ ಫ್ಯಾನ್ಸ್ ವಿರುದ್ಧವೂ ಅಟ್ರಾಸಿಟಿ ಕೇಸ್ ಹಾಕಲು ಸಿದ್ಧತೆ

Updated on: Aug 17, 2023 | 8:14 AM

ಉಪೇಂದ್ರ ಕ್ಷಮೆ ಕೇಳಿದರೂ  ವಿವಾದ ತಣ್ಣಗಾಗುತ್ತಿಲ್ಲ. ಈ ಮಧ್ಯೆ ಕೆಲವರು ಉಪೇಂದ್ರ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು. ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಉಪೇಂದ್ರ ಅಭಿಮಾನಿಗಳ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಉಪೇಂದ್ರ ಅವರ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಸಂಚಲನ ಸೃಷ್ಟಿ ಮಾಡಿತು. ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಾಯಿತು. ಸದ್ಯ ಎಫ್​​ಐಆರ್​ಗೆ ಹೈಕೋರ್ಟ್​ ತಡೆ ನೀಡಿದೆ. ಉಪೇಂದ್ರ (Upendra) ಕ್ಷಮೆ ಕೇಳಿದರೂ  ವಿವಾದ ತಣ್ಣಗಾಗುತ್ತಿಲ್ಲ. ಈ ಮಧ್ಯೆ ಕೆಲವರು ಉಪೇಂದ್ರ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು. ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಉಪೇಂದ್ರ ಅಭಿಮಾನಿಗಳ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಉಪ್ಪಿ ಫ್ಯಾನ್ಸ್​ಗೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us