ಶಕ್ತಿ ಯೋಜನೆಯ ಸವಲತ್ತು ಬಳಸಿಕೊಂಡ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ; ಮಹಿಳಾ ಸಿಬ್ಬಂದಿಯೊಂದಿಗೆ ಕೆಎಸ್ಸಾರ್ಟಿಸಿ ಬಸ್ಸಲ್ಲಿ ಉಚಿತ ಪ್ರಯಾಣ!

ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2023 | 1:27 PM

ಇವರೆಲ್ಲ ಸರ್ಕಾರದಿಂದ ಉತ್ತಮ ಸಂಬಳ ಮತ್ತು ಬೇರೆ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ, ಟಿಕೆಟ್ ಖರೀದಿಸಿ ಪ್ರಯಾಣಿಸಬಹುದಿತ್ತು ಅಂತ ಕೆಲವರು ಅಂದುಕೊಂಡಿರಲಿಕ್ಕೂ ಸಾಕು. ಒಂದರ್ಥದಲ್ಲಿ ಅದು ನಿಜ ಅನಿಸುತ್ತದೆ, ಆದರೆ ಸರ್ಕಾರ ಶಕ್ತಿ ಯೋಜನೆ ಘೋಷಿಸುವಾಗ ಷರತ್ತುಗಳೇನೂ ಸೇರಿಸಿರಲಿಲ್ಲ. ಹಾಗಾಗಿ, ಮಹಿಳಾ ಅಧಿಕಾರಿಗಳು ಯೋಜನೆಯ ಫಲ ಪಡೆಯುತ್ತಿರುವುದರಲ್ಲಿ ತಪ್ಪೇನೂ ಇಲ್ಲ

ಬಾಗಲಕೋಟೆ: ಈ ಸುದ್ದಿಯನ್ನು ಗಮನಿಸಿ. ಬಾಗಲಕೋಟೆಯಿಂದ ತೇರದಾಳಕ್ಕೆ ಹೊರಟಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕೆ ಎಂ ಜಾನಕಿ (KM Janaki), ಅವರ ಕಚೇರಿಯ ಹಾಗೂ ಬೇರೆ ಬೇರೆ ಇಲಾಖೆಯ ಆಧಿಕಾರಿಗಳು ಮತ್ತು ಸಿಬ್ಬಂದಿ ಸಹ ಪ್ರಯಾಣಿಕರು. ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ಜನರ ದೂರು-ದುಮ್ಮಾನ ಆಲಿಸಲು ಡಿಸಿ ಮೇಡಂ ತೇರದಾಳಕ್ಕೆ (Terdal) ಹೊರಟಿದ್ದಾರೆ. ಅದರಲ್ಲೇನು ವಿಶೇಷ ಅಂತ ನೀವು ಅಂದುಕೊಳ್ಳುತ್ತಿರಬಹುದು. ವಿಶೇಷ ಇದೆ ಮಾರಾಯ್ರೇ. ಜಾನಕಿ ಮತ್ತು ಮಹಿಳಾ ಸಿಬ್ಬಂದಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಜಾರಿಗೊಳಿಸಿರುವ ಶಕ್ತಿ ಯೋಜನೆಯ (Shakti scheme) ಸವಲತ್ತು ಪಡೆದು ಪ್ರಯಾಣಿಸುತ್ತಿದ್ದಾರೆ. ಬಸ್ ನಿರ್ವಾಹಕ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಟಕೆಟ್ ವಿತರಿಸುತ್ತಿರುವುದನ್ನು ನೋಡಬಹುದು. ಇವರೆಲ್ಲ ಸರ್ಕಾರದಿಂದ ಉತ್ತಮ ಸಂಬಳ ಮತ್ತು ಬೇರೆ ಆರ್ಥಿಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ, ಟಿಕೆಟ್ ಖರೀದಿಸಿ ಪ್ರಯಾಣಿಸಬಹುದಿತ್ತು ಅಂತ ಕೆಲವರು ಅಂದುಕೊಂಡಿರಲಿಕ್ಕೂ ಸಾಕು. ಒಂದರ್ಥದಲ್ಲಿ ಅದು ನಿಜ ಅನಿಸುತ್ತದೆ, ಆದರೆ ಸರ್ಕಾರ ಶಕ್ತಿ ಯೋಜನೆ ಘೋಷಿಸುವಾಗ ಷರತ್ತುಗಳೇನೂ ಸೇರಿಸಿರಲಿಲ್ಲ. ಹಾಗಾಗಿ, ಮಹಿಳಾ ಅಧಿಕಾರಿಗಳು ಯೋಜನೆಯ ಫಲ ಪಡೆಯುತ್ತಿರುವುದರಲ್ಲಿ ತಪ್ಪೇನೂ ಇಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.