Shivamogga; ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಲಂಬಾಣಿ ಸಮುದಾಯದ ಕೊಡುಗೆ ಬಹಳ ದೊಡ್ಡದು: ಬಂಜಾರಾ ಸಮುದಾಯದ ಮುಖಂಡ
ಅವರನ್ನು ಸಿಎಂ ಮಾಡಲು ನಾವು ಚಂದಾ ಎತ್ತಿ ಸಹಾಯ ಮಾಡಿದ್ದೇವೆ ಎಂದು ಹೇಳಿದ ಅವರು ಇದು ಟೀಸರ್ ಮಾತ್ರ ಪಿಕ್ಚರ್ ಇನ್ನೂ ದೊಡ್ಡದಿದೆ ಎಂದರು.
ಶಿವಮೊಗ್ಗ: ಲಂಬಾಣಿ ಸಮುದಾಯ ಒಳ ಮೀಸಲಾತಿ (internal reservation) ಜಾರಿ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ವಿರುದ್ಧ ಸಿಡಿದೆದ್ದಿದ್ದಾರೆ. ಶಿಕಾರಿಪುರದಲ್ಲಿರುವ ಯಡಿಯೂರಪ್ಪವರ ಮನೆ ಮೇಲೆ ಕಲ್ಲಿ ತೂರಾಟ ಮಾಡಲಾಗಿದೆ. ಶಿವಮೊಗ್ಗದಲ್ಲಿಂದು ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಜಿಲ್ಲಾ ಲಂಬಾಣಿ ಸಮುದಾಯದ (Banjara Community) ಮುಖಂಡರೊಬ್ಬರು ಸದಾಶಿವ ಆಯೋಗದ ಶಿಫಾರಸ್ಸುಗಳ ಮೂಲಕ ನಮ್ಮ ಸಮುದಾಯವನ್ನು ಶೋಷಿಸಲಾಗುತ್ತಿದೆ. ಈ ಆಯೋಗದ ಇನ್ನೊಂದು ರೂಪವೇ ಒಳ ಮೀಸಲಾತಿ. ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ಬಲವಾದ ನಿರೀಕ್ಷೆಯನ್ನು ಯಡಿಯೂರಪ್ಪನವರ ಮೇಲಿಟ್ಟಿಕೊಂಡರೂ ಅವರಿಂದ ನಮಗೆ ಮೋಸವಾಯಿತು. ಅವರನ್ನು ಸಿಎಂ ಮಾಡಲು ನಾವು ಚಂದಾ ಎತ್ತಿ ಸಹಾಯ ಮಾಡಿದ್ದೇವೆ ಎಂದು ಹೇಳಿದ ಅವರು ಇದು ಟೀಸರ್ ಮಾತ್ರ ಪಿಕ್ಚರ್ ಇನ್ನೂ ದೊಡ್ಡದಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
