ಸಿದ್ದರಾಮಯ್ಯಗೆ ಬರೆದ ಪತ್ರದ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ ಕೂಡಲೇ ಪ್ರತಿಕ್ರಿಯಿಸಿದ ಸಿಎಂಗೆ ಧನ್ಯವಾದ ಹೇಳಿದರು!

ರಾಯರೆಡ್ಡಿ ಕೊನೆಗೆ ಹತಾಷರಾಗಿ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ವಿಷಯವನನ್ನು ಅವರ ಗಮನಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಕೂಡಲೇ ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ತಿಳಿಸಿದ್ದಾರೆ. ಆದೇ ಹಿನ್ನೆಲೆಯಲ್ಲಿ ಜಾರ್ಜ್ ಇಂದು ಸಭೆಯೊಂದನ್ನು ಕರೆದಿದ್ದಾರೆ. ತಮ್ಮ ಪತ್ರಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿಯವರಿಗೆ ರಾಯರೆಡ್ಡಿ ಧನ್ಯವಾದ ಹೇಳಿದರು.

ಸಿದ್ದರಾಮಯ್ಯಗೆ ಬರೆದ ಪತ್ರದ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ ಕೂಡಲೇ ಪ್ರತಿಕ್ರಿಯಿಸಿದ ಸಿಎಂಗೆ ಧನ್ಯವಾದ ಹೇಳಿದರು!
|

Updated on: Sep 05, 2023 | 2:17 PM

ಬೆಂಗಳೂರು: ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಬರೆದಿರುವ ಪತ್ರದ ಸಾರಾಂಶ ಏನು ಅಂತ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಅಸಲಿಗೆ ಅವರು ಕಲಬುರಗಿ ಪ್ರಾಂತ್ಯದಲ್ಲಿ (Kalaburagi region) ರೈತರು ಬಳಸುವ ಪಂಪ್ ಸೆಟ್ ಗಳಿಗೆ ಆನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದರಿಂದ ಓವರ್ ಲೋಡ್ ನಂಥ ಸಮಸ್ಯೆ ಎದುರಾಗಿ ಟ್ರಾನ್ಸ್ ಫಾರ್ಮಾರ್ ಗಳು ಪದೇಪದೆ ಸುಟ್ಟು ಹೋಗುವುದು ಜರುಗುತ್ತಿದೆಯಂತೆ. ಸಮಸ್ಯೆಯನ್ನು ಅವರು ಕೊಪ್ಪಳ ಎಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಚೀಫ್ ಇಂಜಿನಿಯರ್ ಗಮನಕ್ಕೆ ತರಲು ಫೋನ್ ಮಾಡಿದಾಗ ಅಧಿಕಾರಿಗಳು ಕರೆ ಸ್ವೀಕರಿಸಿಲ್ಲ. ರಾಯರೆಡ್ಡಿ ಕೊನೆಗೆ ಹತಾಷರಾಗಿ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ವಿಷಯವನನ್ನು ಅವರ ಗಮನಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಕೂಡಲೇ ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ತಿಳಿಸಿದ್ದಾರೆ. ಆದೇ ಹಿನ್ನೆಲೆಯಲ್ಲಿ ಜಾರ್ಜ್ ಇಂದು ಸಭೆಯೊಂದನ್ನು ಕರೆದಿದ್ದಾರೆ. ತಮ್ಮ ಪತ್ರಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿಯವರಿಗೆ ರಾಯರೆಡ್ಡಿ ಧನ್ಯವಾದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us