BBK 11 Finale: ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಈ ವಾರ ಟಾಸ್ಕ್ ಗೆದ್ದವರಿಗೆ ಫಿನಾಲೆ ತಲುಪುವ ಟಿಕೆಟ್ ಸಿಗುತ್ತದೆ. ಆ ಟಿಕೆಟ್ ಪಡೆಯಲು ಹಣಾಹಣಿ ಜೋರಾಗಿದೆ. ಇಷ್ಟು ದಿನದ ಸ್ನೇಹವನ್ನೆಲ್ಲ ಬದಿಗಿಟ್ಟು ಫಿನಾಲೆ ಟಿಕೆಟ್ಗಾಗಿ ಎಲ್ಲ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದಾರೆ. ‘ಪ್ರತಿ ಕ್ಷಣ ಯುದ್ಧ ನಡೆಯುವ ರಣರಂಗವಾಗಿ ಈ ಮನೆ ಬದಲಾಗಲಿದೆ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆಟದ ರೋಚಕತೆ ಈಗ ಜಾಸ್ತಿ ಆಗಿದೆ.
ಬಿಗ್ ಬಾಸ್ ಫಿನಾಲೆಗೆ ತಲುಪಬೇಕು ಎಂಬ ಆಸೆ ಎಲ್ಲರಿಗೂ ಇದೆ. ಆದರೆ ಅದಕ್ಕಾಗಿ ಮನುಷ್ಯತ್ವ ಮರೆಯಬಾರದು. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿಗಳು ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಆ ಕಾರಣದಿಂದ ಈ ವಾರದ ಆಟ ಇನ್ನಷ್ಟು ರೋಚಕ ಆಗಿರಲಿದೆ. ಟಾಸ್ಕ್ ಆಡುವಾಗ ಒಬ್ಬರು ಇನ್ನೊಬ್ಬರ ಮೇಲೆ ಬಿದ್ದಿದ್ದಾರೆ. ಕೈ ಕೈ ಮಿಲಾಯಿಸುವ ಹಂತ ಕೂಡ ಎದುರಾಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us