Sign In

By signing in or creating an account, you agree with Associated Broadcasting Company's Terms & Conditions and Privacy Policy.

Bear in Temple: ಮಾರಮ್ಮನ ದೇವಾಲಯಕ್ಕೆ ಬಂದ ಜಾಂಬವಂತ

Bear in Temple: ಮಾರಮ್ಮನ ದೇವಾಲಯಕ್ಕೆ ಬಂದ ಜಾಂಬವಂತ

ಆಯೇಷಾ ಬಾನು
|

Updated on: Jun 20, 2023 | 10:58 AM

ದಾವಣಗೆರೆಯಲ್ಲಿ ದೇವಸ್ಥಾನವೊಂದಕ್ಕೆ ಕರಡಿ ಪ್ರವೇಶಿಸಿದೆ. ಕರಡಿಯ ಓಡಾಟ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ಘಟನೆ ನಡೆದಿದೆ.

ದಾವಣಗೆರೆ: ಬೆಳ್ಳಂ ಬೆಳಗ್ಗೆ ಮಾರಮ್ಮನ ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಅರಣ್ಯದಿಂದ ದೇವಸ್ಥಾನಕ್ಕೆ ಬಂದ ಕರಡಿ ನೋಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಕರಡಿ ಬಂದು ಹೋಗಿದೆ. ಇದನ್ನು ದೇವಸ್ಥಾನದ ಸಿಸಿ ಟಿವಿಯಲ್ಲಿ ನೋಡಿದ ಜನ ಭಯ ಭೀತರಾಗಿದ್ದಾರೆ. ಪಕ್ಕದ ರಂಗಯ್ಯದುರ್ಗ ಅರಣ್ಯ ಪ್ರದೇಶದಿಂದ ದೇವಸ್ಥಾನಕ್ಕೆ ಕರಡಿ ಬಂದು ಹೋಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಾಮಾನ್ಯವಾಗಿ ಕರಡಿಗಳು ದೇವಸ್ಥಾನಗಳಲ್ಲಿ ಹಚ್ಚಲಾದ ದೀಪದಲ್ಲಿನ ಎಣ್ಣೆ ಕುಡಿಯಲು ಹಾಗೂ ದೇವಸ್ಥಾನದಲ್ಲಿ ಸಿಗುವ ಹಣ್ಣು ಹಂಪಲು ತಿನ್ನಲು ಬರುತ್ತವೆ ಎಂದು ಹೇಳಲಾಗುತ್ತೆ.