AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Potholes: ಬೆಂಗಳೂರು ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಮತ್ತಷ್ಟು ಅವ್ಯವಸ್ಥೆ

Bengaluru Potholes: ಬೆಂಗಳೂರು ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಮತ್ತಷ್ಟು ಅವ್ಯವಸ್ಥೆ

ಭಾವನಾ ಹೆಗಡೆ
|

Updated on:Sep 18, 2025 | 4:20 PM

Share

ಬೆಂಗಳೂರಿನ ರಸ್ತೆ ಗುಂಡಿಗಳು ದೇಶದಾದ್ಯಂತ ಚರ್ಚೆಯಾಗುತ್ತಿವೆ. ಇದರ ಕುರಿತು ಹಲವು ಐಟಿ ದಿಗ್ಗಜರು ಧ್ವನಿ ಎತ್ತಿದ್ದಾರೆ. ಬ್ಲ್ಯಾಕ್ ಬಕ್ ಕಂಪನಿಯ ಸಿಇಓ ರಾಜೇಶ್  ಯಾಬಾಜಿ ಇಲ್ಲಿನ ರಸ್ತೆ ಗುಂಡಿಗಳ ದುಸ್ಥಿತಿ ನೋಡಿ ತಮ್ಮ ಕಂಪನಿಯನ್ನೇ ಸ್ಥಳಾಂತರಗೊಳಿಸಲು ಹೊರಟಿದ್ದಾರೆ. ಈ ಬಗ್ಗೆ Tv9ನ 'ಏನ್ ರೋಡ್ ಗುರು' ಅಭಿಯಾನದ ವೀಡಿಯೋ ಇಲ್ಲಿದೆ ನೋಡಿ

ಬೆಂಗಳೂರು, ಸೆಪ್ಟೆಂಬರ್ 18 : ಬೆಂಗಳೂರಿನ ರಸ್ತೆ ಗುಂಡಿಗಳು ದೇಶವ್ಯಾಪಿಯಾಗಿ ಚರ್ಚೆಗೆ ಗ್ರಾಸವಾಗಿದ್ದು, ಮೋಹನ್ ದಾಸ್ ಪೈ, ರಾಜೇಶ್ ಯಾಬಾಜಿ ಸೇರಿದಂತೆ ಹಲವು ಐಟಿ ದಿಗ್ಗಜರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಕಳೆದ 9 ವರ್ಷಗಳಿಂದ ಬೆಂಗಳೂರಿನ  ಬೆಳ್ಳಂದೂರಿನಲ್ಲಿ ಬ್ಲ್ಯಾಕ್ ಬಕ್ ಕಂಪನಿ ನಡೆಸುತ್ತಿರುವ ರಾಜೇಶ್ ಯಾಬಾಜಿ ಇಲ್ಲಿನ ರಸ್ತೆ ಗುಂಡಿಗಳ ದುಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಿಂದ ರಸ್ತೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗದ ಕಾರಣ ಕಂಪನಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಈ  ಸಂದರ್ಭದಲ್ಲಿ Tv9  ‘ಏನ್ ರೋಡ್ ಗುರು’ ಎಂಬ ಅಭಿಯಾನದ ಮೂಲಕ ಪಣತ್ತೂರು ಮುಖ್ಯ ರಸ್ತೆಯಲ್ಲಿರುವ ಗುಂಡಿಗಳ ದೃಶ್ಯಾವಳಿಗಳು ಇಲ್ಲಿವೆ.

 

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Sep 18, 2025 02:41 PM