ಹಾರದ ವಿಮಾನಗಳು, ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

Updated on: Dec 05, 2025 | 3:13 PM

ಇಂಡಿಗೋ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಅಸ್ತಿ ವಿಸರ್ಜನೆಗೆಂದು ಹರಿದ್ವಾರಕ್ಕೆ ಟಿಕೆಟ್ ಬುಕ್ ಮಾಡಿದ್ದ ಕುಟುಂಬಸ್ಥರಿಗೂ ಸಹ ವಿಮಾನ ಸಿಗದ ಪರದಾಡುವ ಸ್ಥಿತಿ ಎದುರಾಗಿದೆ. ಹೌದು..ಕುಟುಂಬವೊಂದು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆಯ ಪೂಜೆಗೆ ತಯಾರಿ ಮಾಡಿಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದ್ರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದಾಗಿರುವುದು ತಿಳಿದು ಆಘಾತಕ್ಕೊಳಗಾಗಿದ್ದಾರೆ. ಅತ್ತ ಹರಿದ್ವಾರದಲ್ಲಿ ಪೂಜೆಗೆ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗಿದ್ರೆ, ಇತ್ತ ಬೆಂಗಳೂರಿನಿಂದ ವಿಮಾನ ಕ್ಯಾನ್ಸಲ್ ಆಗಿದ್ದರಿಂದ ಕುಟುಂಬ ಅಸ್ತಿಯನ್ನು ಕೈನಲ್ಲೇ ಹಿಡಿದುಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಂಡಿದೆ.

ಬೆಂಗಳೂರು, (ಡಿಸೆಂಬರ್ 05): ಇಂಡಿಗೋ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಅಸ್ತಿ ವಿಸರ್ಜನೆಗೆಂದು ಹರಿದ್ವಾರಕ್ಕೆ ಟಿಕೆಟ್ ಬುಕ್ ಮಾಡಿದ್ದ ಕುಟುಂಬಸ್ಥರಿಗೂ ಸಹ ವಿಮಾನ ಸಿಗದ ಪರದಾಡುವ ಸ್ಥಿತಿ ಎದುರಾಗಿದೆ. ಹೌದು..ಕುಟುಂಬವೊಂದು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆಯ ಪೂಜೆಗೆ ತಯಾರಿ ಮಾಡಿಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದ್ರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದಾಗಿರುವುದು ತಿಳಿದು ಆಘಾತಕ್ಕೊಳಗಾಗಿದ್ದಾರೆ. ಅತ್ತ ಹರಿದ್ವಾರದಲ್ಲಿ ಪೂಜೆಗೆ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗಿದ್ರೆ, ಇತ್ತ ಬೆಂಗಳೂರಿನಿಂದ ವಿಮಾನ ಕ್ಯಾನ್ಸಲ್ ಆಗಿದ್ದರಿಂದ ಕುಟುಂಬ ಅಸ್ಥಿಯನ್ನು ಕೈನಲ್ಲೇ ಹಿಡಿದುಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಂಡಿದೆ.

Published on: Dec 05, 2025 03:11 PM
Loading...
Unable to load recommendations.
Follow Us