ಮಾಧ್ಯಮ ಪ್ರತಿನಿಧಿಗಳಿಂದ ತರಾಟೆಗೊಳಗಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್
ಶ್ರೀಧರ್ ಅವರು ಇಂದು ರಾಮನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸುವಾಗ ಮಾಧ್ಯಮದವರು ಕೇಳಿದ ಕೆಲ ತೀಕ್ಷ್ಣ ಪ್ರಶ್ನೆಗಳಿಗೆ ನಿರುತ್ತರಾದರು ಮತ್ತು ಉತ್ತರ ತೋಚದೆ ತಬ್ಬಿಬ್ಬಾದರು.
ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್ (BT Sridhar) ಇಂದು ರಾಮನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸುವಾಗ ಮಾಧ್ಯಮದವರು ಕೇಳಿದ ಕೆಲ ತೀಕ್ಷ್ಣ ಪ್ರಶ್ನೆಗಳಿಗೆ ನಿರುತ್ತರಾದರು ಮತ್ತು ಉತ್ತರ ತೋಚದೆ ತಬ್ಬಿಬ್ಬಾದರು. ನಿನ್ನೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವಾಗ (toll collection) ಅಷ್ಟೆಲ್ಲ ಗಲಾಟೆಗಳಾದರೂ ನೀವು ಸುದ್ದಿಗೋಷ್ಟಿ ನಡೆಸಿ ಜನರ ಗೊಂದಲಗಳನ್ನು ಪರಿಹರಿಸುವ ಪ್ರಯತ್ನ ಯಾಕೆ ಮಾಡಲಿಲ್ಲ ಅಂತ ಪತ್ರಕರ್ತರು ಕೇಳಿದಾಗ ಶ್ರೀದರ್ ಆರೋಗ್ಯದ ಸಮಸ್ಯೆಗಳನ್ನು (health issues) ಹೇಳಿಕೊಂಡರು. ಹಾಗಾದರೆ ಇವತ್ಯಾಕೆ ಪ್ರೆಸ್ಸರ್ ನಡೆಸುತ್ತಿದ್ದೀರಿ ಅಂತ ಕೇಳಿದಾಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದರಿಂದ ನಡೆಸಬೇಕಾಗಿದೆ ಅಂತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

