ಸಂಸದ ಡಾ ಸಿಎನ್ ಮಂಜುನಾಥ ಈಗ ಪಳಗಿದ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ!

|

Updated on: Oct 08, 2024 | 6:03 PM

ಮೊನ್ನಿನವರೆಗೆ ನಾಡಿನ ಪ್ರಖ್ಯಾತ ಹೃದ್ರೋಗ ತಜ್ಞರೆನಿಸಿಕೊಂಡಿದ್ದ ಡಾ ಮಂಜುನಾಥ ಅವರು ಈಗ ಒಬ್ಬ ನುರಿತ ರಾಜಕಾರಣಿಯ ಹಾಗೆ ಮಾತಾಡುತ್ತಿದ್ದಾರೆ. ಇವತ್ತು ಅವರು ರಾಮನಗರದಲ್ಲಿ ಮಾತಾಡಿದ್ದು ಒಬ್ಬ ಸೀಸನ್ಡ್ ಪೊಲಿಟಿಶಿಯನ್ ನನ್ನು ಮೀರಿಸುವಂತಿತ್ತು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ ಸಿಎನ್ ಮಂಜುನಾಥ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಸಿಪಿ ಯೋಗೇಶ್ವರ್ ಆಥವಾ ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ-ಇಬ್ಬರಲ್ಲಿ ಯಾರು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಕೇಳಿದಾಗ, ಅದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ, ತಾನು ಸಮನ್ವಯ ಮತ್ತು ಸಂಸದೀಯ ಸಮಿತಿಯ ಭಾಗವಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೃದಯವಂತ ಸಂಸದ! ಆಂಜಿಯೋಪ್ಲ್ಯಾಸ್ಟಿ ಅಳವಡಿಸಿ ರೋಗಿಗೆ ಮರುಜೀವ ನೀಡಿದ ಡಾ. ಸಿಎನ್ ಮಂಜುನಾಥ್

Follow us on