ವಿಜಯಪುದ ಶವಾಗಾರದ ಮುಂದೆ ಜಮಾಯಿಸಿದ್ದ ಬಾಗಪ್ಪ ಹರಿಜನ್ ಹುಡುಗರಿಂದ ಅಣ್ಣ ಹೋಗ್ಬಿಟ್ನಲ್ಲೋ ಅಂತ ರೋದನೆ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2025 | 2:28 PM

ಜಮೀನು ವಿವಾದ, ಆಸ್ತಿ ವಿವಾದ ಇತ್ಯರ್ಥ ಮಾಡಿಸಿಕೊಡುತ್ತಿದ್ದ ಬಾಗಪ್ಪ ಹರಿಜನ್ ಒಬ್ಬ ನಟೋರಿಯಸ್ ರೌಡಿಶೀಟರ್. ಕೊಲೆ ಪ್ರಕರಣಗಳೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅವನು ಅರೋಪಿಯಾಗಿದ್ದ. ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಸಹಚರನಾಗಿದ್ದ ಭಾಗಪ್ಪನ ಮೇಲೆ 2018 ರಲ್ಲಿ ಕೋರ್ಟೊಂದರ ಆವರಣದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.

ವಿಜಯಪುರ: ಇವರೆಲ್ಲ ನಿನ್ನೆ ರಾತ್ರಿ ಭೀಕರವಾಗಿ ಕೊಲೆಯಾದ ಬಾಗಪ್ಪ ಹರಿಜನ್​ನ ಹುಡುಗರು ವಿಜಯಪುರ ಜಿಲ್ಲಾಸ್ಪತ್ರೆ ಶವಾಗಾರದ ಮುಂದೆ ಜಮಾಯಿಸಿ ಬಾಗಪ್ಪ ದೇಹದ ಮರಣೋತ್ತರ ಪರೀಕ್ಷೆ ಕೊನೆಗೊಳ್ಳಲು ಕಾಯುತ್ತಿದ್ದಾರೆ. ಒಬ್ಬ ಯುವಕ ಶವಾಗಾರದ ಒಳಗಿಂದ ಹೊರಬರುತ್ತಾನೆ ಮತ್ತು ಶವಾಗಾರದ ಎದುರುಗಡೆ ಕೂತು ರೋದಿಸುತ್ತಿರುವ ಮತ್ತೊಬ್ಬ ಯುವಕನ ತೆಕ್ಕೆಗೆ ಬಿದ್ದು ಅವನನ್ನು ಸಂತೈಸುತ್ತಾ ತಾನೂ ರೋದಿಸುತ್ತಾನೆ. ಬಾಗಪ್ಪ ತನ್ನದೇ ಆದ ಒಂದು ಗುಂಪು ಕಟ್ಟಿಕೊಂಡಿದ್ದ ಮತ್ತು ಅವನೊಂದಿಗೆ ನೂರಾರು ಯುವಕರಿದ್ದರು ಅನ್ನೋದು ದೃಶ್ಯಗಳಿಂದ ಸಾಬೀತಾಗುತ್ತದೆ. ಬಾಗಪ್ಪ ವಿಜಯಪುರದ ಮದೀನಾ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮತ್ತು ಮಂಗಳರಾತ್ರಿ ಅಲ್ಲೇ ಅವನ ಹತ್ಯೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಪ್ಪ ಹರಿಜನ್ ಬದುಕಿಗೆ ಅಂತ್ಯ ಕಾಣಿಸಲು ಹಂತಕರು ಫೂಲ್​ಪ್ರೂಫ್​ ಯೋಜನೆಯೊಂದಿಗೆ ಅಗಮಿಸಿದ್ದರು!

Published on: Feb 12, 2025 02:19 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.