AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್

ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್

ರಾಜೇಶ್ ದುಗ್ಗುಮನೆ
|

Updated on: May 22, 2024 | 8:41 AM

Share

‘ಭಜರಂಗಿ’ ಚಿತ್ರದಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ

‘ಭಜರಂಗಿ’, ‘ಜೈ ಮಾರುತಿ 800’, ‘ವೇದ’, ‘ಅಜಿತ್’ ಸೇರಿ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ (Nandish) ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ. ‘ಅವನು (ನಂದೀಶ್) 15 ದಿನ ನಮ್ಮನೆಯಲ್ಲೇ ಇದ್ದ. ನಿನ್ನೆ ನಮ್ಮನೆಯಿಂದ ಹೋದ. ಫೋನ್​ನಲ್ಲಿ ಕೆಟ್ಟದಾಗಿ ಮಾತನಾಡಿದ. ಕೆಲ ವರ್ಷಗಳ ಹಿಂದೆ ನನ್ನ ಯಜಮಾನರು ತೀರಿ ಹೋದರು. ಆಗ ಒಂದು ವರ್ಷದ ಒಳಗೆ ಮಗಳ ಮದುವೆ ಮಾಡಬೇಕು ಎಂದುಕೊಂಡೆವು. ಈ ವೇಳೆ ಸಿಕ್ಕವನು ಇವನು. ನಮಗೆ ಗಂಡು ದಿಕ್ಕಿಲ್ಲ, ಹೇಳಿದಂತೆ ಕೇಳಿಸಬಹುದು ಅನ್ನೋದು ಅವನ ಪ್ಲ್ಯಾನ್ ಆಗಿತ್ತು.  ಹೀಗಾಗಿ, ನನ್ನ ಮಗಳನ್ನು ಆಸ್ತಿಗೋಸ್ಕರ ಮದುವೆ ಆದ’ ಎಂದಿದ್ದಾರೆ ವಿದ್ಯಾ ತಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More