ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್
‘ಭಜರಂಗಿ’ ಚಿತ್ರದಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ
‘ಭಜರಂಗಿ’, ‘ಜೈ ಮಾರುತಿ 800’, ‘ವೇದ’, ‘ಅಜಿತ್’ ಸೇರಿ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ (Nandish) ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ. ‘ಅವನು (ನಂದೀಶ್) 15 ದಿನ ನಮ್ಮನೆಯಲ್ಲೇ ಇದ್ದ. ನಿನ್ನೆ ನಮ್ಮನೆಯಿಂದ ಹೋದ. ಫೋನ್ನಲ್ಲಿ ಕೆಟ್ಟದಾಗಿ ಮಾತನಾಡಿದ. ಕೆಲ ವರ್ಷಗಳ ಹಿಂದೆ ನನ್ನ ಯಜಮಾನರು ತೀರಿ ಹೋದರು. ಆಗ ಒಂದು ವರ್ಷದ ಒಳಗೆ ಮಗಳ ಮದುವೆ ಮಾಡಬೇಕು ಎಂದುಕೊಂಡೆವು. ಈ ವೇಳೆ ಸಿಕ್ಕವನು ಇವನು. ನಮಗೆ ಗಂಡು ದಿಕ್ಕಿಲ್ಲ, ಹೇಳಿದಂತೆ ಕೇಳಿಸಬಹುದು ಅನ್ನೋದು ಅವನ ಪ್ಲ್ಯಾನ್ ಆಗಿತ್ತು. ಹೀಗಾಗಿ, ನನ್ನ ಮಗಳನ್ನು ಆಸ್ತಿಗೋಸ್ಕರ ಮದುವೆ ಆದ’ ಎಂದಿದ್ದಾರೆ ವಿದ್ಯಾ ತಾಯಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
