ಅತಿಥಿಗಳು ಕೇವಲ ಅತಿಥಿಗಳಲ್ಲ: ಟ್ವಿಸ್ಟ್ ಕೊಟ್ಟ ಸುದೀಪ್

Updated on: Nov 29, 2025 | 7:55 PM

Bigg Boss Kannada 12: ಕಳೆದ ವಾರ ಬಿಗ್​​ಬಾಸ್ ಮನೆಗೆ ಕೆಲ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿಯೂ ಆ ಎಲ್ಲ ಅತಿಥಿಗಳು ಹಾಜರಾಗಿದ್ದಾರೆ. ವಾರದ ಬಳಿಕ ಅತಿಥಿಗಳು ಮರಳುತ್ತಾರೇ ಎಂದೇ ಎಣಿಸಲಾಗಿತ್ತು. ಆದರೆ ಅವರನ್ನು ಬೀಳ್ಕೊಡುವ ಮುಂಚೆ ಕಿಚ್ಚ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಬಂದ ಐವರು ಅತಿಥಿಗಳಲ್ಲಿ ಮೂವರು ಮಾತ್ರವೇ ಹೊರಗೆ ಹೋಗಲಿದ್ದಾರೆ. ಇಬ್ಬರು ಬಿಗ್​​ಬಾಸ್ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ಕಳೆದ ವಾರ ಬಿಗ್​​ಬಾಸ್ (Bigg Boss) ಮನೆಗೆ ಕೆಲ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿಯೂ ಆ ಎಲ್ಲ ಅತಿಥಿಗಳು ಹಾಜರಾಗಿದ್ದಾರೆ. ವಾರದ ಬಳಿಕ ಅತಿಥಿಗಳು ಮರಳುತ್ತಾರೇ ಎಂದೇ ಎಣಿಸಲಾಗಿತ್ತು. ಆದರೆ ಅವರನ್ನು ಬೀಳ್ಕೊಡುವ ಮುಂಚೆ ಕಿಚ್ಚ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಬಂದ ಐವರು ಅತಿಥಿಗಳಲ್ಲಿ ಮೂವರು ಮಾತ್ರವೇ ಹೊರಗೆ ಹೋಗಲಿದ್ದಾರೆ. ಇಬ್ಬರು ಬಿಗ್​​ಬಾಸ್ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅತಿಥಿಯಾಗಿ ಅಲ್ಲ ಬದಲಿಗೆ ಸ್ಪರ್ಧಿಯಾಗಿ. ಯಾರದು ಎಂದು ತಿಳಿಯಲು ಎಪಿಸೋಡ್ ನೋಡಬೇಕಿದೆ. ಪ್ರೋಮೊ ವಿಡಿಯೋ ಇಲ್ಲಿ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More