ಮತ್ತೆ ಜೈಲು ಸೇರಿದ ಚೈತ್ರಾ, ಕೈವಾಡದ ಆರೋಪ ನಿಜವಾ?
Bigg Boss Kannada: ಬಿಗ್ಬಾಸ್ ಕನ್ನಡದಲ್ಲಿ ಚೈತ್ರಾ ಕುಂದಾಪುರ ಮತ್ತೊಮ್ಮೆ ಕಳಪೆ ಪಟ್ಟ ಹೊತ್ತುಕೊಂಡು ಜೈಲು ಸೇರಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಶೋ ನಲ್ಲಿ ಅವರು ಜೈಲು ಸೇರಿದ್ದರು.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಮತ್ತೊಮ್ಮೆ ಜೈಲು ಸೇರಿದ್ದಾರೆ. ಇದು ಎರಡನೇ ಬಾರಿ ಈ ಮನೆಯಲ್ಲಿ ಅವರು ಜೈಲು ಸೇರುತ್ತಿದ್ದಾರೆ. ಈ ಮೊದಲೂ ಸಹ ಒಮ್ಮೆ ಕಳಪೆ ಪಟ್ಟ ತೆಗೆದುಕೊಂಡು ಅವರು ಜೈಲು ಪಾಲಾಗಿದ್ದರು. ಕೆಲ ದಿನಗಳ ಹಿಂದಷ್ಟೆ ಅವರು ನ್ಯಾಯಾಲಯದ ವಿಚಾರಣೆಗೆಂದು ಬಿಗ್ಬಾಸ್ನಿಂದ ಹೊರಗೆ ಬಂದಿದ್ದರು, ಕಾಕತಾಳೀಯದಂತೆ ಅದೇ ವಾರದಲ್ಲಿ ಅವರು ಬಿಗ್ಬಾಸ್ ಮನೆಯ ಜೈಲು ಸೇರಿದ್ದಾರೆ. ಆದರೆ ಈ ಬಾರಿ ಅವರಿಗೆ ಕಳಪೆ ಪಟ್ಟ ನೀಡಿರುವುದು ಚೈತ್ರಾ ಅವರಿಗೆ ಸುತಾರಾಂ ಹಿಡಿಸಿಲ್ಲ. ಉಗ್ರಂ ಮಂಜು ಹಾಗೂ ಕೆಲವರ ಪಿತೂರಿಯಿಂದಲೇ ತಮಗೆ ಕಳಪೆ ದೊರೆತಿದೆ ಎಂದು ಚೈತ್ರಾ ಆರೋಪಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us