ನೋಡ ನೋಡುತ್ತಿದ್ದಂತೆ ದಿನಸಿ ವಸ್ತುಗಳನ್ನು ಕಳೆದುಕೊಂಡ ಮನೆ ಮಂದಿ; ಸಂತೋಷ್ ಇದಕ್ಕೆ ಕಾರಣ?  

|

Updated on: Nov 06, 2023 | 12:55 PM

ಸೋಮವಾರದ ಎಪಿಸೋಡ್​ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ (Bigg Boss) ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೂರು ಜನರು ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್​ನಲ್ಲಿ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಸೋಮವಾರದ (ನವೆಂಬರ್ 6) ಎಪಿಸೋಡ್​ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ. ಇದರ ಪ್ರೋಮೋ ರಿಲೀಸ್ ಮಾಡಲಾಗಿದೆ. ‘ನನ್ನ ಬಳಿ ಆಗಲ್ಲ’ ಎಂದು ಸಂತೋಷ್ ಇಳಿಯುತ್ತಿರುವುದು ವಿಡಿಯೋದಲ್ಲಿದೆ.  ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್​ನ 24 ಗಂಟೆ ಲೈವ್ ವೀಕ್ಷಿಸುವ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:11 am, Mon, 6 November 23

Follow us on