ನೋಡ ನೋಡುತ್ತಿದ್ದಂತೆ ದಿನಸಿ ವಸ್ತುಗಳನ್ನು ಕಳೆದುಕೊಂಡ ಮನೆ ಮಂದಿ; ಸಂತೋಷ್ ಇದಕ್ಕೆ ಕಾರಣ?  

Updated on: Nov 06, 2023 | 12:55 PM

ಸೋಮವಾರದ ಎಪಿಸೋಡ್​ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ (Bigg Boss) ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೂರು ಜನರು ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್​ನಲ್ಲಿ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಸೋಮವಾರದ (ನವೆಂಬರ್ 6) ಎಪಿಸೋಡ್​ನಲ್ಲಿ ಟಫ್ ಟಾಸ್ಕ್ ನೀಡಲಾಗಿದೆ. ಯಾವುದಾದರೂ ಒಂದು ವಸ್ತುವನ್ನು ಬಿಗ್ ಬಾಸ್ ಹೇಳುತ್ತಾರೆ. ಅದರ ಮೇಲೆ ಮನೆ ಮಂದಿ ಹತ್ತಿ ನಿಲ್ಲಬೇಕು. ಯಾರಾದ್ದಾರೂ ಕಾಲು ನೆಲಕ್ಕೆ ತಾಗಿದರೆ ನಿಗದಿ ಪಡಿಸಿದ ದಿನಸಿ ವಸ್ತುವನ್ನು ಹಿಂಪಡೆಯಲಾಗುತ್ತದೆ. ಇದರ ಪ್ರೋಮೋ ರಿಲೀಸ್ ಮಾಡಲಾಗಿದೆ. ‘ನನ್ನ ಬಳಿ ಆಗಲ್ಲ’ ಎಂದು ಸಂತೋಷ್ ಇಳಿಯುತ್ತಿರುವುದು ವಿಡಿಯೋದಲ್ಲಿದೆ.  ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್​ನ 24 ಗಂಟೆ ಲೈವ್ ವೀಕ್ಷಿಸುವ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 06, 2023 09:11 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More