ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಬಿಗ್ ಬಾಸ್ ಹಂಸಾ

Edited By:

Updated on: May 01, 2026 | 8:13 PM

‘ವಸುದೇವ ಕುಟುಂಬ’ ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.

‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಆ ಧಾರಾವಾಹಿಯಿಂದ ಹೊರಗೆ ಬಂದೆ. ನಮಗೆ ಗೌರವ ಇಲ್ಲದ ಜಾಗದಲ್ಲಿ ನಾನು ಕೆಲಸ ಮಾಡಲ್ಲ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಾವು ಬಿಟ್ಟು ಬಂದಿದ್ದೇವೆ. ಅನಿಲ್ ಟಿಆರ್​ಪಿ ಫ್ರಾಡ್ ಮಾಡಿದ್ದಾನೆ. ಇಂಥ ಒಬ್ಬ ನಿರ್ಮಾಪಕನಿಂದ ಇನ್ನುಳಿದವರಿಗೂ ಕೆಟ್ಟ ಹೆಸರು. ನನಗೆ 3 ಲಕ್ಷ ರೂಪಾಯಿ ಬರಬೇಕಿದೆ. ನನಗೆ ಆ ಹಣ ಬರದಿದ್ದರೂ ಪರವಾಗಿಲ್ಲ. ಅವನ ಮಾನ ಮರ್ಯಾದೆ ತೆಗೆಯದೇ ಬಿಡಲ್ಲ. ಇನ್ನೊಮ್ಮೆ ಅವನು ಯಾರಿಗೂ ಮೋಸ ಮಾಡಬಾರದು. 10 ವರ್ಷ ಆದರೂ ಪರವಾಗಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದು ಹಂಸಾ (Hamsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us