ಬಿಗ್ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್ಬಾಸ್ ಕನ್ನಡ ಸೀಸನ್ 11ರ ಭಾನುವಾರದ ಎಪಿಸೋಡ್ಗೆ ಸುದೀಪ್ ಬದಲಿಗೆ ಮನೆಯೊಳಕ್ಕೆ ಸೃಜನ್ ಲೋಕೇಶ್ ಹೋಗಿದ್ದಾರೆ. ಈ ವೇಳೆ ಹನುಮಂತು, ಮಾನಸ ಬಿಗ್ಬಾಸ್ ಮನೆಯಲ್ಲಿ ಹೇಗಿದ್ದಾರೆ, ಅವರು ಹೇಗಿರಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಬಿಗ್ಬಾಸ್ ಮನೆಗೆ ಹನುಮಂತು ಬಂದ ಬಳಿಕ ಮನೆಯ ವಾತಾವರಣ ಸಾಕಷ್ಟು ಬದಲಾಗಿದೆ. ಜಗದೀಶ್ ಇದ್ದಾಗ ಪ್ರತಿ ದಿನ ಜಗಳ ನೋಡುತ್ತಿದ್ದ ಬಿಗ್ಬಾಸ್ ಮನೆಯಲ್ಲಿ ಇತ್ತೀಚೆಗೆ ತುಸುವಾದರೂ ಶಾಂತಿ ನೆಲೆಸಿದೆ. ಆದರೆ ಇತ್ತೀಚೆಗೆ ಮಾನಸ, ಬಿಗ್ಬಾಸ್ ಮನೆಯಲ್ಲಿ ಎಲ್ಲರ ಮೇಲೂ ಜಗಳ ಮಾಡಿಕೊಳ್ಳುತ್ತಿದ್ದಾರೆ. ಪುಟ್ಟ-ಪುಟ್ಟದಕ್ಕೆಲ್ಲ ಖ್ಯಾತೆ ತೆಗೆಯುತ್ತಿದ್ದಾರೆ. ಇದರಿಂದ ಮನೆಯ ಇತರೆ ಕೆಲವು ಸದಸ್ಯರ ನೆಮ್ಮದಿ ಹಾಳಾಗಿದೆ. ಭಾನುವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಗೆ ಸೃಜನ್ ಲೋಕೇಶ್ ಬಂದಿದ್ದು, ಮನೆಯ ಸದಸ್ಯರ ವಿಚಾರಣೆ ಮಾಡಿದ್ದಾರೆ. ಈ ವೇಳೆ, ಹನುಮಂತು, ಮಾನಸ ಬಿಗ್ಬಾಸ್ ಮನೆಯಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಲ್ಲದೆ, ಹೇಗೆ ವರ್ತಿಸಬೇಕು ಎಂಬುದನ್ನು ತಮ್ಮದೇ ಶೈಲಿನಲ್ಲಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
