ಸೂಟ್ಕೇಸ್ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11ರ ಕಟ್ಟ ಕಡೆಯ ವಾರದ ಪಂಚಾಯಿತಿ ನಡೆದಿದೆ. ಈ ಬಾರಿ ಶನಿವಾರವೇ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ನಡೆಯಲಿದೆ. ಭಾನುವಾರವೂ ಒಬ್ಬ ಸ್ಪರ್ಧಿ ಮನೆಗೆ ಹೋಗಲಿದ್ದಾರೆ. ಶನಿವಾರದ ಎಲಿಮಿನೇಷನ್ ಭಿನ್ನಾಗಿರಲಿದೆ. ಸ್ಪರ್ಧಿಗಳ ಸೂಟ್ಕೇಸ್ ನಲ್ಲಿಯೇ ಅವರ ಎಲಿಮಿನೇಷನ್ ಟಿಕೆಟ್ ಇರಲಿದೆ.
ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಸೀಸನ್ನ ಕೊನೆಯ ವಾರದ ಪಂಚಾಯಿತಿ ಇಂದು (ಜನವರಿ 18) ಶುರುವಾಗಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಈ ವಾರ ಇಬ್ಬರು ಮನೆಗೆ ಹೋಗಲಿದ್ದಾರೆ. ಅದರಲ್ಲಿ ಒಬ್ಬರು ಶನಿವಾರ ಇನ್ನೊಬ್ಬರು ಭಾನುವಾರ ಮನೆಗೆ ಹೋಗಲಿದ್ದಾರೆ. ಸುದೀಪ್ ಈ ಬಾರಿ ಭಿನ್ನವಾಗಿ ಎಲಿಮಿನೇಷನ್ ಮಾಡಿಸಿದ್ದಾರೆ. ಎಲ್ಲರ ಸೂಟ್ಕೇಸ್ ಅನ್ನು ಅವರ ಮುಂದೆಯೇ ಇರಿಸಿ, ಆ ಸೂಟ್ಕೇಸ್ ಒಳಗೆ ಅವರ ಭವಿಷ್ಯ ಇರಿಸಿದ್ದಾರೆ. ಯಾರ ಸೂಟ್ಕೇಸ್ನಲ್ಲಿ ಸಂದೇಶ ಇದೆಯೋ ಅವರು ಮನೆಗೆ ಹೋಗಲಿದ್ದಾರೆ. ರಜತ್, ಧನರಾಜ್, ಉಗ್ರಂ ಮಂಜು, ಗೌತಮಿ ಮತ್ತು ಭವ್ಯಾ ಇವರಲ್ಲಿ ಮನೆಗೆ ಹೋಗೋದು ಯಾರು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

