ಬಿಗ್ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್
Bigg Boss Kannada season 11: ಈ ವಾರ ಬಿಗ್ಬಾಸ್ ಮನೆಯಲ್ಲಿ ರಾಜ-ರಾಣಿಯರ ಆಡಳಿತ ನಡೆದಿದೆ. ಇದೀಗ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಆಗಮಿಸಿದ್ದು, ರಾಜ-ರಾಣಿಯರ ಆಡಳಿತ ಹೇಗಿತ್ತು ವಿಶ್ಲೇಷಣೆ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಈ ವಾರ ರಾಜಕುಟುಂಬದ ಟಾಸ್ಕ್ ನಡೆದಿದೆ. ಉಗ್ರಂ ಮಂಜು ಮಹಾರಾಜ ಆಗಿದ್ದರೆ, ಮಹಾರಾಜನ ಸಹೋದರಿ ಮಹಾರಾಣಿಯಾಗಿದ್ದು ಮೋಕ್ಷಿತಾ. ಇಬ್ಬರ ನಡುವೆ ಜೋರು ಜಗಳಗಳು ನಡೆದಿವೆ. ಸಾಮ್ರಾಜ್ಯಕ್ಕಾಗಿ ಕಿತ್ತಾಟ ನಡೆದಿದೆ. ಇಬ್ಬರ ನಡುವೆ ಮಾತಿನ ಚಕಮಕಿ, ಪರಸ್ಪರ ಹೀಗಳೆತ ಮಿತಿ ಮೀರಿದೆ. ಇದೀಗ ವಾರಾಂತ್ಯ ಬಂದಿದ್ದು ಸುದೀಪ್ ಬಂದಿದ್ದಾರೆ. ಈ ವಾರದ ಪಂಚಾಯಿತಿಯಲ್ಲಿ, ರಾಜ, ರಾಣಿಯರ ಆಡಳಿತದ ವಿಶ್ಲೇಷಣೆ ಮಾಡಲಿದ್ದಾರೆ. ಇದೀಗ ಪ್ರೋಮೋ ಬಿಡುಗಡೆ ಆಗಿದ್ದು ಸುದೀಪ್, ಬಿಗ್ಬಾಸ್ ಮನೆಯ ರಾಜಕುಟುಂಬದ ವಿಶ್ಲೇಷಣೆ ನಡೆಸುವ ಝಲಕ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us