ಬಿಗ್ಬಾಸ್ (BiggBoss) ಮನೆಯಲ್ಲಿ ಹಲವು ಹೈಲೆಟ್ ಅಂಶಗಳಿವೆ. ಸಂಗೀತಾರ ಹೋರಾಟ, ಕಾರ್ತಿಕ್ರ ಇಬ್ಬಗೆ ನೀತಿ, ವಿನಯ್ರ ಅಗ್ರೆಶನ್, ಡ್ರೋನ್ ಪ್ರತಾಪ್ರ ಯೋಜನೆಗಳು, ನಮ್ರತಾರ ಡ್ಯಾನ್ಸ್, ಹೊರಗೆ ಹೋಗ ಮೈಖಲ್ರ ಟಾಸ್ಕ್ ಮಾಡುವ ರೀತಿ. ಇದೆಲ್ಲದರ ಜೊತೆಗೆ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರ ಗೆಳೆತನವೂ ಹೈಲೆಟ್ ಅಂಶವಾಗಿತ್ತು. ಆದರೆ ಇದೀಗ ಈ ಇಬ್ಬರ ಗೆಳೆತನ ಮುರಿದು ಬಿದ್ದಂತಿದೆ. ಟಾಸ್ಕ್ ನಿಂದ ವರ್ತೂರು ಸಂತು, ತುಕಾಲಿಯನ್ನು ಹೊರಗಿಟ್ಟಿದ್ದೇ ಇದಕ್ಕೆ ಕಾರಣವಾಗಿದೆ. ಅದಾದ ಬಳಿಕ ನಡೆದ ಬೆಳವಣಿಗೆಗಳಲ್ಲಿ ತುಕಾಲಿಯ ಮಾತಿನಿಂದ ವರ್ತೂರು ಬೇಸರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಏನೇನಾಗಿದೆ ಎಂಬುದು ಇಂದಿನ ಎಪಿಸೋಡ್ ಬಳಿಕ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ