Assembly Polls: ಬಿಜೆಪಿ ಸರ್ಕಾರ ಅಕ್ಕಿ, ಮೊಸರು ಮೇಲೆ ಜಿಎಸ್ ಟಿ ವಿಧಿಸಿ ಬಡವರ ರಕ್ತ ಹೀರುತ್ತಿದೆ: ಕೃಷ್ಣ ಭೈರೇಗೌಡ

Updated on: Jan 27, 2023 | 3:50 PM

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಜ್ಜಿಗೆ ಮೊಸರು, ಅಕ್ಕಿ, ಅವಲಕ್ಕಿಯ ಮೇಲೆ ಜಿ ಎಸ್ ಟಿ ಹೇರಿ ಬಡವರನ್ನು ಸುಲಿಯುತ್ತದೆ, ಆದರೆ ಅಂಬಾನಿ ಮತ್ತು ಅದಾನಿಗಳಂಥ ಕುಬೇರರಿಗೆ ಟ್ಯಾಕ್ ವಿನಾಯಿತಿ ನೀಡುತ್ತದೆ ಎಂದು ಭೈರೇಗೌಡ ಹೇಳಿದರು.

ಮಂಡ್ಯ:  ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಮಂಡ್ಯ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣ ಭೈರೇಗೌಡ (Krishna Byre Gowda) ಅವರು ಬಿಜೆಪಿ ಸರ್ಕಾರಗಳನ್ನು (BJP governments) ರೈತವಿರೋಧಿ ಎಂದು ಜರಿದರು. 2013 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಹಾಲಿನ ಮೇಲೆ ರೈತರಿಗೆ ಸಿಗುವ ಸಬ್ಸಿಡಿಯನ್ನು (subsidy) ರೂ. 5 ಹೆಚ್ಚು ಮಾಡಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ರೈತರಿಗೆ ಸಿಗುವ ಸಹಾಯಧನವನ್ನು 5 ನಯಾಪೈಸೆಯೂ ಹೆಚ್ಚು ಮಾಡಿಲ್ಲ ಎಂದು ಭೈರೇಗೌಡ ಹೇಳಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಜ್ಜಿಗೆ ಮೊಸರು, ಅಕ್ಕಿ, ಅವಲಕ್ಕಿಯ ಮೇಲೆ ಜಿ ಎಸ್ ಟಿ ಹೇರಿ ಬಡವರನ್ನು ಸುಲಿಯುತ್ತದೆ, ಆದರೆ ಅಂಬಾನಿ ಮತ್ತು ಅದಾನಿಗಳಂಥ ಕುಬೇರರಿಗೆ ಟ್ಯಾಕ್ ವಿನಾಯಿತಿ ನೀಡುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More